ADVERTISEMENT

ಗೋಕರ್ಣ ಕೋಟಿತೀರ್ಥ ತಾತ್ಕಾಲಿಕ ಸ್ವಚ್ಛ

ಪ್ರಜಾವಾಣಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2014, 6:18 IST
Last Updated 21 ಫೆಬ್ರುವರಿ 2014, 6:18 IST
ಗೋಕರ್ಣದ ಕೋಟಿತೀರ್ಥದಲ್ಲಿ ಬೆಳೆದಿರುವ ಪಾಚಿ ತೆಗೆಯುತ್ತಿರುವುದು
ಗೋಕರ್ಣದ ಕೋಟಿತೀರ್ಥದಲ್ಲಿ ಬೆಳೆದಿರುವ ಪಾಚಿ ತೆಗೆಯುತ್ತಿರುವುದು   

ಗೋಕರ್ಣ: ಮಹಾಶಿವರಾತ್ರಿ ಸಮೀಪಿಸುತ್ತಿರುವುದರಿಂದ ಭಕ್ತರ ಭಾವನೆಗೆ ಧಕ್ಕೆ ಬಾರದಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಕೋಟಿತೀರ್ಥದ ಪಾಚಿಯನ್ನೆಲ್ಲಾ ತೆಗೆದು ತಾತ್ಕಾಲಿಕವಾಗಿ ಸ್ವಚ್ಛಗೊಳಿಸಿದೆ.

‘ಒಟ್ಟು  ₨40 ಸಾವಿರ ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿದ್ದು ಮಹಾಶಿವರಾತ್ರಿ ಮುಗಿದ ನಂತರ ನೀರನೆಲ್ಲಾ ತೆಗೆದು ಸಂಪೂರ್ಣ ಸ್ವಚ್ಛತಾ ಕಾಮಗಾರಿಯನ್ನು ಮಾಡಲಾಗುವುದು. ಈಗಾಗಲೇ ಪ್ರವಾಸೋದ್ಯಮ ಇಲಾಖೆ ನಿರ್ಮಿತಿ ಕೇಂದ್ರದವರಿಗೆ ಈ ಕಾಮಗಾರಿ ಹೊಣೆ ವಹಿಸಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಜನ್ನು ತಿಳಿಸಿದ್ದಾರೆ.

‘ಕೋಟಿತೀರ್ಥದ ಕುರಿತು ‘ಪ್ರಜಾವಾಣಿ’ ಇತ್ತೀಚೆಗೆ ವರದಿ ಪ್ರಕಟಿಸಿತ್ತು. ಸ್ಥಳೀಯರೂ ಸಹ ಚಿಗುರು ಮಿತ್ರಮಂಡಳಿ ಮತ್ತು ಮಹಿಳಾ ಮಂಡಳಾ ಇವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಶಾಸಕರಿಗೆ ಮನವಿ ಸಲ್ಲಿಸಿದ್ದು ಇಲ್ಲಿ ಉಲ್ಲೇಖನೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.