ಮುಂಡಗೋಡ: ತಾಲ್ಲೂಕಿನ ಅತ್ತಿವೇರಿ ಗೌಳಿ ದಡ್ಡಿಯ ಸನಿಹ ಆಹಾರ, ನೀರು ಅರಸುತ್ತ ಬಂದಿದ್ದ ಗಂಡು ಜಿಂಕೆಯೊಂದು ಸೋಮವಾರ ನಾಯಿಗಳ ದಾಳಿಗೆ ಬಲಿಯಾಗಿದೆ.
ಗ್ರಾಮದ ಸಮೀಪ ಗೋವಿನಜೋಳದ ಗದ್ದೆಯಲ್ಲಿ ಜಿಂಕೆ ಸಂಚರಿಸುತ್ತಿದ್ದಾಗ, ಒಮ್ಮಿಂದೊಮ್ಮೆಲೆ ಐದಾರು ನಾಯಿಗಳು ದಾಳಿ ನಡೆಸಿವೆ. ಜೀವ ಉಳಿಸಿಕೊಳ್ಳಲು ಜಿಂಕೆಯು ಗದ್ದೆಯಲ್ಲಿ ಅತ್ತಿಂದಿತ್ತ ಓಡಾಡಿದೆ. ಆದರೂ ನಾಯಿಗಳು ಬೆನ್ನಟ್ಟಿ, ಜಿಂಕೆಯ ಹಿಂಬದಿ ಕಾಲಿನ ಭಾಗ, ಕುತ್ತಿಗೆ ಕೆಳಭಾಗದಲ್ಲಿ ಕಚ್ಚಿ, ಗಂಭೀರವಾಗಿ ಗಾಯಗೊಳಿಸಿವೆ. ಗ್ರಾಮಸ್ಥರು ನಾಯಿಗಳನ್ನು ಓಡಿಸಿ, ಜಿಂಕೆಯನ್ನು ಉಳಿಸುವ ಪ್ರಯತ್ನ ಮಾಡಿದರು.
‘ನಾಯಿ ದಾಳಿಗೆ ಬಲಿಯಾದ ಗಂಡುಜಿಂಕೆಯನ್ನು ಪಶುವೈದ್ಯರು ಪರೀಕ್ಷಿಸಿದರು. ನಂತರ ಗ್ರಾಮಸ್ಥರ ಸಹಕಾರದಿಂದ ಕಾಡಂಚಿನಲ್ಲಿ ಸುಡಲಾಯಿತು’ ಎಂದು ಇಂದೂರ ಉಪವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.