ADVERTISEMENT

ಮಕ್ಕಳ ಹಬ್ಬದಲ್ಲಿ ಪ್ರತಿಭೆಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2014, 9:43 IST
Last Updated 27 ಫೆಬ್ರುವರಿ 2014, 9:43 IST
ಚಿತ್ರಕಲಾ ರಚನೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಮನಮೋಹಕ ಚಿತ್ರಗಳನ್ನು ರಚಿಸಿದರು.
ಚಿತ್ರಕಲಾ ರಚನೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಮನಮೋಹಕ ಚಿತ್ರಗಳನ್ನು ರಚಿಸಿದರು.   

ಕಾರವಾರ: ಮಕ್ಕಳ ಹಬ್ಬದ ಅಂಗವಾಗಿ ನಗರದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಗಳ ಅನಾವರಣ ಮಾಡಿದರು.

ನಗರದ ರವೀಂದ್ರ ಟ್ಯಾಗೋರ್‌ ಕಡಲತೀರದಲ್ಲಿ ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಮರಳಿನಲ್ಲಿ ಚಿತ್ರಕಲೆ ರಚನೆ ಸೇರಿದಂತೆ ವಿವಿಧ ವಿವಿಧ ಸ್ಪರ್ಧೆಗಳು ನಡೆಯಿತು.

ಗುರುಭವನದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಲೀಲಾಬಾಯಿ ಠಾಣೇಕರ್, ‘ಮಕ್ಕಳಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂತಹ ಹಬ್ಬಗಳು ಉತ್ತಮ ವೇದಿಕೆಯಾಗಿದೆ. ಮಕ್ಕಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸಲು ಅವಕಾಶಗಳನ್ನು ಕಲ್ಪಿಸುವುದು ಮುಖ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ವಿಜೇತರ ವಿವರ ಇಂತಿದೆ: ಮರಳಿನಲ್ಲಿ ಚಿತ್ರಕಲೆ (ಪ್ರಾಥಮಿಕ ವಿಭಾಗ)– ವಿಪೇಶ್, ಸೇಂಟ್ ಮೈಕಲ್ ಶಾಲೆ ಕಾರವಾರ (ಪ್ರಥಮ), ಅಮಿಶಾ, ಸೇಂಟ್ ಮೈಕಲ್ ಶಾಲೆ ಕಾರವಾರ (ದ್ವಿತೀಯ) ಹಾಗೂ ರೂಪಿಣಿ, ಶಾಸಕರ ಮಾದರಿ ಶಾಲೆ ಕಾರವಾರ (ತೃತೀಯ).

ಮರಳಿನಲ್ಲಿ ಚಿತ್ರಕಲೆ (ಪ್ರೌಢಶಾಲಾ ವಿಭಾಗ): ಮಾರ್ಷಲ್, ಸೇಂಟ್ ಜೋಸೆಫ್ ಶಾಲೆ (ಪ್ರಥಮ), ಸುಜನಾ ಸೇಂಟ್ ಮೈಕಲ್ ಶಾಲೆ, ಕಾರವಾರ (ದ್ವಿತೀಯ) ಹಾಗೂ ಸುಚಿತ್ರಾ ಮತ್ತು ಸುಪ್ರಿಯಾ ಸುಮತಿ ದಾಮ್ಲೆ ಶಾಲೆ (ತೃತೀಯ).

ಹಗ್ಗಜಗ್ಗಾಟ (ಬಾಲಕರ ವಿಭಾಗ): ಬಾಲ ಮಂದಿರ ಶಾಲೆ ಕಾರವಾರ (ಪ್ರಥಮ), ಹಿಂದು ಹೈಸ್ಕೂಲ್ (ದ್ವಿತೀಯ).

ಬಾಲಕಿಯರ ವಿಭಾಗ– ಬಾಲ ಮಂದಿರ ಶಾಲೆ ಕಾರವಾರ (ಪ್ರಥಮ), ಹಿಂದು ಹೈಸ್ಕೂಲ್ ಕಾರವಾರ (ದ್ವಿತೀಯ).

ಸಂಗೀತ ಕುರ್ಚಿ (ಬಾಲಕರ ವಿಭಾಗ): ಲಿಖಿತ್ ಕುಮಾರ್ ಬಾಲಮಂದಿರ ಶಾಲೆ (ಪ್ರಥಮ), ನಿಕಿಲ್ ಆರ್. ಬಾಲಮಂದಿರ ಪ್ರೌಢಶಾಲೆ (ದ್ವಿತೀಯ) ಹಾಗೂ ಗಗನಜಿತ್ ಬೊಮಕರ್ ಹಿಂದು ಹೈಸ್ಕೂಲ್ (ತೃತೀಯ).

ಬಾಲಕಿಯರ ವಿಭಾಗ– ಅನಿತಾ ಎಸ್. ಗೊಲ್ಲರ ಸರ್ಕಾರಿ ಪ್ರೌಢಶಾಲೆ, ಕಾರವಾರ (ಪ್ರಥಮ), ಮೊನಿಷ ಬಾಲಮಂದಿರ ಕಾರವಾರ (ದ್ವಿತೀಯ) ಹಾಗೂ ನಿಧಿ ಜಿ. ಬೊಮ್ಮನ, ಬಾಲಮಂದಿರ ಶಾಲೆ (ತೃತೀಯ).

ತಾಲೂಕು ಪಂಚಾಯ್ತಿ ಅಧ್ಯಕ್ಷೆ ಆರತಿ ಬಾನಾವಳಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಫಾ. ಫರ್ನಾಂಡಿಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರೇವಣಸಿದ್ದಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರಭಾವತಿ ಕರ್ನಿಂಗ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.