ದಾಂಡೇಲಿ: ನಗರದ ವೆಸ್ಟ್ಕೋಸ್ಟ್ ಪೇಪರ್ ಮಿಲ್ನ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾನವ ಸಂಪನ್ಮೂಲ ವಿಭಾಗ ಚಾಂಪಿಯನ್ ಆಗಿ ಹೊರಹೊಮ್ಮಿತು.ಫೈನಲ್ನಲ್ಲಿ ಎದುರಾದ ಮಾನವ ಸಂಪನ್ಮೂಲ ವಿಭಾಗ ಹಾಗೂ ಎಲೆಕ್ಟ್ರಕಲ್ ತಂಡ ಎದುರಾದವು. ಎಲೆಕ್ಟ್ರಿಕಲ್ ವಿಭಾಗ ಎಲ್ಲ ವಿಕೆಟ್ ಕಳೆದುಕೊಂಡು 57 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಮಾನವ ಸಂಪನ್ಮೂಲ ವಿಭಾಗವು ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿತು.ರೂಪೇಶ ಪವಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಉತ್ತಮ ಬ್ಯಾಟ್ಸ್ಮನ್ ಆಗಿ ಫಕೀರಪ್ಪ ಛಲವಾದಿ, ಉತ್ತಮ ಬೌಲರ್ ಆಗಿ ನಾರಾಯಣ ಜೊಡೆಣ್ಣವರ ಬಹುಮಾನ ಪಡೆದರು. ರೂಪೇಶ ಪವಾರ ಸರಣಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದರು.
ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಎಸ್.ಎನ್. ಪಾಟೀಲ ಮಾತನಾಡಿ, ‘ಕಾರ್ಮಿಕರಿಗಾಗಿಯೇ ಟೂರ್ನಿ ಆಯೋಜಿಸಿರುವುದು ನಿಜಕ್ಕೂ ಒಂದು ಮಾದರಿ ಕಾರ್ಯಕ್ರಮ’ ಎಂದರು.
ಕಾರ್ಮಿಕ ಸೇನೆಯ ಅಧ್ಯಕ್ಷ, ವಕೀಲ ಬಿ.ಡಿ.ಹಿರೇಮಠ, ಕಂಪೆನಿಯ ಹಿರಿಯ ಅಧಿಕಾರಿ ಬಿ.ಎಸ್.ರಾಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.