ADVERTISEMENT

ಸುಸಂಸ್ಕೃತ ದೇಶ ನಿರ್ಮಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 6:45 IST
Last Updated 21 ಸೆಪ್ಟೆಂಬರ್ 2011, 6:45 IST

ಯಲ್ಲಾಪುರ: `ಯುವಕರು ಶಿಕ್ಷಣದ ಜೊತೆಗೆ ಸುಸಂಸ್ಕೃತ ದೇಶ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಶಾಸಕ ವಿ.ಎಸ್.ಪಾಟೀಲ್  ಸಲಹೆ ನೀಡಿದರು.

 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ  ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನೆಮ್ಮದಿಯ ಬದುಕು ನಡೆಸಲು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಸಹಾಯಕವಾಗಿದೆಯಲ್ಲದೇ ನಮ್ಮ ಸಂಸ್ಕೃತಿಯ ಉಳಿಸಲು ಸಹಕಾರಿಯಾಗಿದೆ. ವಿದಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೇ ದೇಶ ಕಟ್ಟಲು ಮುಂದಾಗಬೇಕೆಂದು ಹೇಳಿದರು.

ತಹಸೀಲ್ದಾರ ಮಂಜುನಾಥ ಬಳ್ಳಾರಿ ಮಾತನಾಡಿದರು. ಸಂಸ್ಥೆಯ ಪ್ರಾಚಾರ್ಯ ಡಾ. ಎಸ್.ಎಸ್. ಕಲ್ಲೂರ್ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಪಾಟೀಲ್, ನಾನು ಪಾಟೀಲ್, ಉಪನ್ಯಾಸಕಿ ದಾಕ್ಷಾಯಣಿ ಹೆಗಡೆ, ಪ.ಪಂ. ಸದಸ್ಯ ಯೋಗೇಶ ಹಿರೇಮಠ ಉಪಸ್ಥಿತರಿದ್ದರು. ಉಪನ್ಯಾಸಕ ರಮೇಶ ಆರ್.ಎಚ್. ಸ್ವಾಗತಿಸಿದರು.

ಅಣ್ಣಪ್ಪ ಮಳೀಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾ ಗಾಂವ್ಕರ್ ನಿರೂಪಿಸಿದರು. ಮಂಜುನಾಥ ಛಲವಾದಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.