ಯಲ್ಲಾಪುರ: ಅಕ್ರಮವಾಗಿ ಲಾರಿಯ ಮೂಲಕ ಕಸಾಯಿಖಾನೆಗೆ ಕೋಣಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಸೋಮವಾರ ಬಂಧಿಸಿರುವ ಇಲ್ಲಿನ ಪೊಲೀಸರು, 18 ಕೋಣಗಳನ್ನು ರಕ್ಷಿಸಿದ್ದಾರೆ.
ಮಂಗಳೂರು ವೇಣೂರಿನ ನಿವಾಸಿಗಳಾದ ಲಾರಿ ಚಾಲಕ ಹೈದರ್ ರಮಣದ್(35), ಬಾಬು ಮಾದು(58) ಹಾಗೂ ಫಾರುಕ್ ಮಂಗಳೂರ(30) ಬಂಧಿತ ಆರೋಪಿಗಳು.
ಧಾರವಾಡ ಜಿಲ್ಲೆಯ ಕಲಘಟಗಿಯಿಂದ ಮಂಗಳೂರಿನ ಕಸಾಯಿಖಾನೆಗೆ ಕೋಣಗಳನ್ನು ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು, ಪಟ್ಟಣದ ಕೆ.ಮಿಲನ್ ಹೋಟೆಲ್ ಬಳಿ ವಾಹನವನ್ನು ವಶಪಡಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.