ADVERTISEMENT

ಯಲ್ಲಾಪುರ: ಭೀಕರ ಅಪಘಾತದಲ್ಲಿ ಮಗು ಸಾವು

ಬೀಡಾಡಿ ದನಗಳನ್ನು ತಪ್ಪಿಸಲು ಹೋಗಿ ಕಾರು ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 21 ಮೇ 2022, 4:43 IST
Last Updated 21 ಮೇ 2022, 4:43 IST
ಯಲ್ಲಾಪುರ ಥಾಲ್ಲೂಕಿನ ಶಿರಸಿ ರಸ್ತೆಯ ಜಂಬೆಸಾಲ್ ಮತ್ತು ಮಳಲಗಾಂವ್ ನಡುವೆ ಸಂಭವಿಸಿದ ಅಪಘಾತದಲ್ಲಿ ನುಜ್ಜು ಗುಜ್ಜಾದ ಕಾರು
ಯಲ್ಲಾಪುರ ಥಾಲ್ಲೂಕಿನ ಶಿರಸಿ ರಸ್ತೆಯ ಜಂಬೆಸಾಲ್ ಮತ್ತು ಮಳಲಗಾಂವ್ ನಡುವೆ ಸಂಭವಿಸಿದ ಅಪಘಾತದಲ್ಲಿ ನುಜ್ಜು ಗುಜ್ಜಾದ ಕಾರು   

ಯಲ್ಲಾಪುರ: ರಸ್ತೆಯಲ್ಲಿ ಅಡ್ಡಬಂದ ಬೀಡಾಡಿ ದನಗಳನ್ನು ತಪ್ಪಿಸಲು ಹೋಗಿ ರಸ್ತೆಪಕ್ಕದ ಮರಕ್ಕೆ ಕಾರು ಡಿಕ್ಕಿ ಹೊಡೆದು ಮಗುಚಿಬಿದ್ದು ಕಾರಲ್ಲಿದ್ದ ಮೂರು ವರ್ಷದ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮಗುವಿನ ತಂದೆ, ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಾಲ್ಲೂಕಿನ ಶಿರಸಿ ರಸ್ತೆಯಲ್ಲಿ ಜಂಬೆಸಾಲ್ ಮತ್ತು ಮಳಲಗಾಂವ್ ನಡುವೆ ಶುಕ್ರವಾರ ಈ ಅಪಘಾತ ಸಂಭವಿಸಿದ್ದು ಪಟ್ಟಣದ ಅಡಿಕೆ ವ್ಯಾಪಾರಿ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಇವರ ಮೊಮ್ಮಗ ಸುಯೋಗ ಸಾಗರ ಹೆಗಡೆ (3) ಮೃತ ಬಾಲಕ.

ಕಾರು ಚಲಾಯಿಸುತ್ತಿದ್ದ ಮಗುವಿನ ತಂದೆ ಸಾಗರ ಮಹಾಬಲೇಶ್ವರ ಹೆಗಡೆ ಹಾಗೂ ತಾಯಿ ನವ್ಯಾ ಹೆಗಡೆ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಯಲ್ಲಾಪುರದ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಅತಿವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗುವಾಗ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.