ADVERTISEMENT

ಎಸಿಬಿ ದಾಳಿ | ಪಿಡಬ್ಲ್ಯುಡಿ ಎಇಇ ಕಚೇರಿಯಲ್ಲಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 12:16 IST
Last Updated 12 ಜೂನ್ 2019, 12:16 IST
ಉದಯ ಛಬ್ಬಿ
ಉದಯ ಛಬ್ಬಿ   

ಜೊಯಿಡಾ:ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕಎಂಜಿನಿಯರ್ (ಎಇಇ)ಉದಯ ಛಬ್ಬಿ ಅವರ ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬುಧವಾರ ಬೆಳಿಗ್ಗೆ ದಾಳಿ ನಡೆಸಿದರು. ವಿವಿಧ ದಾಖಲೆಗಳನ್ನು ಪರಿಶೀಲಿಸಿದರು.

ಅವರುಅಕ್ರಮವಾಗಿಆಸ್ತಿ ಸಂಪಾದಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿಸಿಪಿಐ ವಿಶ್ವನಾಥ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿದರು. ಇದೇರೀತಿ, ದಾಂಡೇಲಿಯಲ್ಲಿರುವ ಅವರ ಸಹೋದರನ ನಿವಾಸದಲ್ಲೂ ದಾಖಲೆಗಳ ಪರಿಶೀಲನೆ ಮಾಡಲಾಗಿದೆ.

ಜೊಯಿಡಾದಲ್ಲಿ ಇಲಾಖೆಯ ವಸತಿ ಗೃಹವಿದ್ದು, ಅದಕ್ಕೆ ಬೀಗ ಹಾಕಲಾಗಿದೆ. ಅದನ್ನು ಕೂಡ ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಉದಯಅವರು20 ವರ್ಷಗಳಿಂದ ಜೊಯಿಡಾ, ದಾಂಡೇಲಿ ಮತ್ತು ಹಳಿಯಾಳ ತಾಲ್ಲೂಕುಗಳಲ್ಲಿಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ಆಗಿಕಾರ್ಯ ನಿರ್ವಹಿಸುತ್ತಿದ್ದಾರೆ. ಜೊಯಿಡಾ ಉಪವಿಭಾಗದಲ್ಲಿ2017ರಿಂದ ಎಇಇ ಆಗಿದ್ದಾರೆ.

ಎಸಿಬಿ ಅಧಿಕಾರಿಗಳು ಎರಡು ವಾರಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ ದಾಳಿ ಮಾಡಿದ ಎರಡನೇ ಪ್ರಕರಣವಿದಾಗಿದೆ. ಈ ಹಿಂದೆ ರಾಮನಗರದ ಕಂದಾಯ ನಿರೀಕ್ಷಕ ಎ.ವಿ.ಪಾಟೀಲ್ ಅವರು ಬಡ ಮಹಿಳೆಯಿಂದ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.