ADVERTISEMENT

ಹತ್ಯೆ ಖಂಡಿಸಿ ಮೌನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2018, 10:00 IST
Last Updated 28 ಜುಲೈ 2018, 10:00 IST
ದಾಂಡೇಲಿಯಲ್ಲಿ ಹಿರಿಯ ವಕೀಲ ಅಜಿತ ನಾಯಕ ಅವರ ಹತ್ಯೆ ಖಂಡಿಸಿ ಕಾರವಾರದಲ್ಲಿ ವಕೀಲರು ಶನಿವಾರ ಪ್ರತಿಭಟನಾ ಮೆರವಣಿಗೆ ಮಾಡಿದರು
ದಾಂಡೇಲಿಯಲ್ಲಿ ಹಿರಿಯ ವಕೀಲ ಅಜಿತ ನಾಯಕ ಅವರ ಹತ್ಯೆ ಖಂಡಿಸಿ ಕಾರವಾರದಲ್ಲಿ ವಕೀಲರು ಶನಿವಾರ ಪ್ರತಿಭಟನಾ ಮೆರವಣಿಗೆ ಮಾಡಿದರು   

ಕಾರವಾರ:ದಾಂಡೇಲಿಯಲ್ಲಿ ಹಿರಿಯ ವಕೀಲ ಅಜಿತ ನಾಯಕ ಅವರನ್ನು ಹತ್ಯೆ ಮಾಡಿದ್ದನ್ನು ಖಂಡಿಸಿ ನಗರದಲ್ಲಿ ವಕೀಲರು ಶನಿವಾರ ಮೌನ ಮೆರವಣಿಗೆ ಮಾಡಿದರು.

ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಸಭೆ ಸೇರಿದ ವಕೀಲರು, ‘ನಿಷ್ಪಕ್ಷಪಾತ ತನಿಖೆ ಕೈಗೊಂಡುಆರೋಪಿಯನ್ನು ಕೂಡಲೇ ಬಂಧಿಸಬೇಕು. ವಕೀಲರ ಮೇಲೆ ಪದೇಪದೇ ನಡೆಯುತ್ತಿರುವ ಇಂತಹ ದಾಳಿಯನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು’ ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಸ್.ಕೆ.ಪವಾರ್, ಕಾರ್ಯದರ್ಶಿ ಮಹೇಶ್ ಬಿ.ಹರಿಕಂತ, ಖಜಾಂಚಿ ಎಸ್.ಎ.ಖಾಜಿ ಹಾಗೂ ನೂರಾರು ಸದಸ್ಯರು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.