ADVERTISEMENT

ಶಿರಸಿ: ನೆರೆ ಸಂತ್ರಸ್ತರಿಗೆ ಅಮೆರಿಕ ಹವ್ಯಕ ಅಸೋಸಿಯೇಶನ್ ನೆರವು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 14:03 IST
Last Updated 5 ಆಗಸ್ಟ್ 2021, 14:03 IST

ಶಿರಸಿ: ಅತಿವೃಷ್ಟಿಯಿಂದ ಕೃಷಿ ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಕಳಚೆ, ಇನ್ನಿತರ ಪ್ರದೇಶಗಳ ಜನರಿಗೆ ನೆರವಾಗಲು ಅಮೆರಿಕದ ಹವ್ಯಕ ಅಸೋಸಿಯೇಶನ್ ₹ 5 ಲಕ್ಷಕ್ಕೂ ಅಧಿಕ (7 ಸಾವಿರ ಅಮೆರಿಕನ್ ಡಾಲರ್) ದೇಣಿಗೆ ನೀಡಿದೆ.

ನೆರೆ ಸಂತ್ರಸ್ತರಿಗೆ ನೆರವಾಗುವಂತೆ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನೀಡಿದ ಕರೆಗೆ ಸ್ಪಂದಿಸಿರುವ ಅಸೋಸಿಯೇಶನ್, ದೇಣಿಗೆಯನ್ನು ಮಠದ ವತಿಯಿಂದ ಕೈಗೊಳ್ಳುತ್ತಿರುವ ನೆರವು ಕಾರ್ಯಕ್ಕೆ ಬಳಸಿಕೊಳ್ಳಲು ವಿನಂತಿಸಿದೆ.

ಭೈರುಂಬೆ ಶಾರದಾಂಬಾ ಶಿಕ್ಷಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹೆಸರಿನಲ್ಲಿ ಇರುವ ನವದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ಹಣ ಜಮಾ ಮಾಡಲಾಗಿದೆ ಎಂದು ಅಸೋಸಿಯೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.