ಭಟ್ಕಳ: ತಮ್ಮ ಆಟೊದಲ್ಲಿ ಪ್ರಯಾಣಿಸಿದ್ದ ಮಹಿಳೆಯೊಬ್ಬರು ಬಿಟ್ಟುಹೋಗಿದ್ದ, ಸುಮಾರು ₹3.50ಲಕ್ಷ ಮೌಲ್ಯದ ಚಿನ್ನಾಭರಣ ಇದ್ದ ಪರ್ಸನ್ನು ಚಾಲಕ ಪೊಲೀಸರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ತಾಲ್ಲೂಕಿನ ಸಬ್ಬತ್ತಿಯ ಅಣ್ಣಪ್ಪ ಗೊಂಡ ಅವರು ಪರ್ಸ್ ಅನ್ನು ಮರಳಿಸಿದವರು. ಸೋಮವಾರ ಮಧ್ಯಾಹ್ನದಿಂದ ಹಲವು ಪ್ರಯಾಣಿಕರನ್ನು ಕರೆದೊಯ್ದಿದ್ದ ಅವರಿಗೆಪರ್ಸ್ ಯಾರದೆಂದು ತಿಳಿಯಲಿಲ್ಲ. ಅದರಲ್ಲಿ ಆಭರಣಗಳ ಜತೆಗೆಪಾನ್ಕಾರ್ಡ್ಸಹ ಇತ್ತು. ಅದನ್ನು ನಗರ ಪೊಲೀಸ್ ಠಾಣೆಗೆ ತಂದು ಎ.ಎಸ್.ಐ ನವೀನ್ ಬೋರ್ಕರ್ ಅವರಿಗೆ ನೀಡಿದರು.
ಪಾನ್ ಕಾರ್ಡ್ ಆಧಾರದ ಮೇಲೆ ಪರ್ಸ್ ವಾರಸುದಾರರನ್ನು ಪತ್ತೆ ಹಚ್ಚಲಾಯಿತು. ಪರ್ಸ್ ಕಳೆದುಕೊಂಡಿದ್ದ ತಾಲ್ಲೂಕಿನ ಬೆಳಕೆಯ ಜಯಂತಿ ಮೊಗೇರಅವರನ್ನು ಠಾಣೆಗೆ ಕರೆಸಿ ಪರ್ಸನ್ನು ಮರಳಿಸಲಾಯಿತು. ಪ್ರಾಮಾಣಿಕತೆ ಮೆರೆದ ಆಟೊ ಚಾಲಕ ಅಣ್ಣಪ್ಪ ಗೊಂಡ ಅವರನ್ನು ಎ.ಎಸ್.ಪಿನಿಖಿಲ್.ಬಿ ಸನ್ಮಾನಿಸಿದರು. ರಿಕ್ಷಾ ಯೂನಿಯನ್ ಅಧ್ಯಕ್ಷ ಕೃಷ್ಣನಾಯ್ಕ ಆಸರಿಕೇರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.