ADVERTISEMENT

ವಾಹನ ಕಳವು; ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 17 ಮೇ 2022, 15:43 IST
Last Updated 17 ಮೇ 2022, 15:43 IST
ಓಮ್ನಿ ಕಾರು ಕಳವು ಮಾಡಿದ ಆರೋಪಿಗಳನ್ನು ಬನವಾಸಿ ಪೊಲೀಸರು ಬಂಧಿಸಿದ್ದು, ವಾಹನವನ್ನು ಜಪ್ತಿ ಮಾಡಿದ್ದಾರೆ
ಓಮ್ನಿ ಕಾರು ಕಳವು ಮಾಡಿದ ಆರೋಪಿಗಳನ್ನು ಬನವಾಸಿ ಪೊಲೀಸರು ಬಂಧಿಸಿದ್ದು, ವಾಹನವನ್ನು ಜಪ್ತಿ ಮಾಡಿದ್ದಾರೆ   

ಶಿರಸಿ: ಓಮ್ನಿ ಕಾರನ್ನು ಕಳವು ಮಾಡಿದ ಮೂವರು ಆರೋಪಿಗಳನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ. ‌

ಶಿರಸಿಯ ಗಣೇಶ ನಗರ ಭಾಸ್ಕರ ಕಾಲೊನಿಯ ಪ್ರಸನ್ನ ಕುರುಬರ (42), ಹೊಸ ಬಸ್ ನಿಲ್ದಾಣ ಸಮೀಪದ ನವೀನ ಚವ್ಹಾಣ (22) ಹಾಗೂ ಗಣೇಶ ನಗರದ ನಿಖಿಲ್ ಗೌಡ (27) ಬಂಧಿತರು. ಕೊರ್ಲಕಟ್ಟೆಯ ನಿವಾಸಿ ಮಹೇಶ ತೇಲಂಗ (54) ಎಂಬುವವರು ತಮ್ಮ ಮನೆಯ ಹಿಂದೆ ನಿಲ್ಲಿಸಿದ್ದ ಓಮ್ನಿ ಕಾರು ಕಾಣೆಯಾಗಿದ್ದಾಗಿ ಮೇ 11ರಂದು ಪೊಲೀಸರಿಗೆ ದೂರು ನೀಡಿದ್ದರು. ತಂಡ ರಚಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು.

ಕಳವು ಮಾಡಿದ ಓಮ್ನಿ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ. ಪಿ.ಎಸ್.ಐ.ಗಳಾದ ಹಣಮಂತ ಬಿರಾದಾರ, ಚಂದ್ರಕಲಾ ಪತ್ತಾರ ನೇತೃತ್ವದಲ್ಲಿ ಎ.ಎಸ್‍.ಐ ಪ್ರಶಾಂತ ಡಿ.ನಾಯ್ಕ, ಸಿಬ್ಬಂದಿ ಚಂದ್ರಪ್ಪ ಕೊರವರ, ಸಂತೋಷ, ಮಂಜುನಾಥ.ಬಿ, ಮಂಜುನಾಥ.ಡಿ.ಎನ್, ಶಿವರಾಜ್‍ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.