ಶಿರಸಿ: ಸಾಹಿತಿ ಬಿ.ಎಚ್.ಶ್ರೀಧರ ಹೆಸರಿನಲ್ಲಿ ನೀಡುವ ಬಿ.ಎಚ್.ಶ್ರೀ ಶಿಕ್ಷಣ ಪುರಸ್ಕಾರಕ್ಕೆ ಸಿದ್ದಾಪುರ ಎಂಜಿಸಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಭಾಗ್ಯಶ್ರೀ ದೊಡ್ಮನೆ ಆಯ್ಕೆಯಾಗಿದ್ದಾರೆ.
ಪುರಸ್ಕಾರವು ₹ 2000 ನಗದು, ಪ್ರಶಸ್ತಿಪತ್ರವನ್ನು ಒಳಗೊಂಡಿದೆ. ಏ.24ರಂದು ಶಿರಸಿಯಲ್ಲಿ ನಡೆಯುವ ಬಿ.ಎಚ್.ಶ್ರೀಧರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪುರಸ್ಕಾರವನ್ನು ವಿತರಿಸಲಾಗುತ್ತದೆ ಎಂದು ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ.ಟಿ.ನಾರಾಯಣ ಭಟ್ಟ, ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ್ ತಿಳಿಸಿದ್ದಾರೆ. ಪ್ರಸ್ತುತ ಕುವೆಂಪು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಎಂ.ಎ ಓದುತ್ತಿರುವ ಭಾಗ್ಯಶ್ರೀ, ಕಾನಗೋಡಿನ ಅಕ್ಷತಾ ಮತ್ತು ಆನಂದ ದೊಡ್ಮನೆ ಪುತ್ರಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.