ADVERTISEMENT

ಭಟ್ಕಳ:ಮೀನುಗಾರರ ಬಲೆಗೆ ಬಿದ್ದ ಮೊಸಳೆ!

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 16:12 IST
Last Updated 19 ಆಗಸ್ಟ್ 2020, 16:12 IST
ಭಟ್ಕಳದ ಅಳ್ವೆಕೋಡಿಯಲ್ಲಿ ಮೀನುಗಾರರ ಬಲೆಗೆ ಬುಧವಾರ ಸಿಕ್ಕಿದ ಮೊಸಳೆಯನ್ನು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಲಾಯಿತು.
ಭಟ್ಕಳದ ಅಳ್ವೆಕೋಡಿಯಲ್ಲಿ ಮೀನುಗಾರರ ಬಲೆಗೆ ಬುಧವಾರ ಸಿಕ್ಕಿದ ಮೊಸಳೆಯನ್ನು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಲಾಯಿತು.   

ಭಟ್ಕಳ: ತಾಲ್ಲೂಕಿನ ವೆಂಕಟಾಪುರ ಹೊಳೆಯ ಅಳ್ವೆಕೋಡಿಯಲ್ಲಿ ಬುಧವಾರ ಮೀನುಗಾರರ ಬಲೆಗೆ ಸುಮಾರು ಎಂಟು ಅಡಿ ಉದ್ದದ ಮೊಸಳೆಯೊಂದು ಸಿಕ್ಕಿದೆ.

ಅಳ್ವೆಕೋಡಿಯಲ್ಲಿ ಯಶವಂತ ಕೃಷ್ಣ ಮೊಗೇರ ಎಂಬುವವರ ‘ಹರಿ ಓಂ’ ಎಂಬ ದೋಣಿಯ ಮೂಲಕ ಮೀನು ಹಿಡಿಯಲು ಏಂಡಿ ಬಲೆ ಹಾಕಲಾಗಿತ್ತು. ಬಲೆಯನ್ನು ಎಳೆದು ಮೀನುಗಳನ್ನು ತೆಗೆಯಲು ಮೀನುಗಾರರು ಮುಂದಾದಾಗ ಮೀನಿನೊಂದಿಗೆ ಮೊಸಳೆಯೂ ಪತ್ತೆಯಾಯಿತು. ಸಮುದ್ರದ ಅಬ್ಬರ ಹೆಚ್ಚಿರುವ ಕಾರಣ ಹಿನ್ನೀರಿನಲ್ಲಿ ಮೊಸಳೆ ಸಮುದ್ರಕ್ಕೆ ಬಂದಿರಬಹುದು ಎಂದು ಊಹಿಸಲಾಗಿದೆ.

ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ ಮತ್ತು ಸಿಬ್ಬಂದಿ, ಮೀನುಗಾರರ ಸಹಾಯದಿಂದ ಮೊಸಳೆಯ ಬಾಯಿಕಟ್ಟಿ ಬೋನಿನಲ್ಲಿ ಹಾಕಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.