ADVERTISEMENT

ಲಕ್ಷದ್ವೀಪದಲ್ಲಿ ಶಿರಸಿ ಮೂಲದ ಯೋಧ ಸಾವು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 16:19 IST
Last Updated 11 ಆಗಸ್ಟ್ 2021, 16:19 IST
ಹರೀಶ ನಾರಾಯಣ ನಾಯ್ಕ
ಹರೀಶ ನಾರಾಯಣ ನಾಯ್ಕ   

ಶಿರಸಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ (ಸಿ.ಆರ್.ಪಿ.ಎಫ್.) ಕರ್ತವ್ಯದಲ್ಲಿದ್ದ ತಾಲ್ಲೂಕಿನ ಇಟಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊರ್ಗಿಕೊಡ್ಳ ಗ್ರಾಮದ ಯೋಧರೊಬ್ಬರು ಬುಧವಾರ ಲಕ್ಷದ್ವೀಪದಲ್ಲಿ ಸಾವಿಗೀಡಾಗಿದ್ದಾರೆ.

ಹರೀಶ ನಾರಾಯಣ ನಾಯ್ಕ (45) ಮೃತ ಯೋಧ. ಕಳೆದ ಇಪ್ಪತ್ತು ವರ್ಷಗಳಿಂದ ಕರ್ತವ್ಯದಲ್ಲಿದ್ದರು. ‘ಸೇನಾ ಕೊಠಡಿಯಲ್ಲಿ ನೇಣಿಗೆ ಶರಣಾಗಿರುವ ಮಾಹಿತಿ ಲಭಿಸಿದೆ. ಗುರುವಾರ ಮೃತದೇಹವನ್ನು ಅವರ ಹುಟ್ಟೂರಿಗೆ ಕರೆತರಲಾಗುತ್ತಿದೆ’ ಎಂದು ಗ್ರಾಮೀಣ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT