ADVERTISEMENT

ಬಾವಿಗೆ ಬಿದ್ದು ಜಿಂಕೆ ಸಾವು

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 12:28 IST
Last Updated 27 ಜೂನ್ 2020, 12:28 IST
ಬಾವಿಗೆ ಬಿದ್ದು ಮೃತಪಟ್ಟ ಜಿಂಕೆ
ಬಾವಿಗೆ ಬಿದ್ದು ಮೃತಪಟ್ಟ ಜಿಂಕೆ   

ಶಿರಸಿ: ತಾಲ್ಲೂಕಿನ ಸಾಲೆಕೊಪ್ಪದಲ್ಲಿ ಶುಕ್ರವಾರ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ತೋಟಕ್ಕೆ ನುಗ್ಗಿದ್ದ ಜಿಂಕೆಯೊಂದು ತೋಟದಲ್ಲಿರುವ ಕೆರೆಗೆ ಬಿದ್ದು ಮೃತಪಟ್ಟಿದೆ. ಹಲಸಿನ ಹಣ್ಣು ತಿನ್ನಲು ಬಂದಿದ್ದ ಜಿಂಕೆಯನ್ನು ಕಂಡು ನಾಯಿಗಳು ಬೆನ್ನಟ್ಟಿದವು. ಇದರಿಂದ ತಪ್ಪಿಸಿಕೊಳ್ಳಲು ಜಿಂಕೆ ತೋಟದ ಒಳಗೆ ಓಡಿದೆ. ಓಡುವ ಭರದಲ್ಲಿ ಆಯತಪ್ಪಿ ಅದು ತೋಟದ ಕೆರೆಗೆ ಬಿದ್ದಿದೆ. ಮರಣೋತ್ತರ ಪರೀಕ್ಷೆಯ ನಂತರ ಎಸಿಎಫ್ ರಘು, ಬನವಾಸಿ ಆರ್‌ಎಫ್‌ಒ ಉಷಾ ಉಪಸ್ಥಿತಿಯಲ್ಲಿ ಅರಣ್ಯ ಸಿಬ್ಬಂದಿ, ಜಿಂಕೆಯ ಅಂತಿಮ ಕಾರ್ಯ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.