ADVERTISEMENT

ಅಂಕೋಲಾ: ಹೆಜ್ಜೇನು ದಾಳಿ; ಹೆಡ್‌ ಕಾನ್‌ಸ್ಟೆಬಲ್‌ ಸಾವು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 19:46 IST
Last Updated 23 ಡಿಸೆಂಬರ್ 2021, 19:46 IST
ಹಸನ್ ಖಾನ್ ಕರೀಂಖಾನ್
ಹಸನ್ ಖಾನ್ ಕರೀಂಖಾನ್   

ಅಂಕೋಲಾ (ಉತ್ತರ ಕನ್ನಡ): ಹೆಜ್ಜೇನು ದಾಳಿಗೆ ಸಿಲುಕಿ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಅಬಕಾರಿ ಇಲಾಖೆಯ ಸಿಬ್ಬಂದಿ ಯಲ್ಲಾಪುರದ ಹಸನ್ ಖಾನ್ ಕರೀಂಖಾನ್ (45) ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಅಬಕಾರಿ ನಿರೀಕ್ಷಕರ ಕಚೇರಿ ಹೆಡ್‌ಕಾನ್‌ಸ್ಟೆಬಲ್‌ ಆಗಿ ಅವರು ಕಾರ್ಯನಿರ್ವಹಿಸುತ್ತಿದ್ದರು.

ಹಸನ್ ಖಾನ್, ಬುಧವಾರ ಮಧ್ಯಾಹ್ನ ಉಪಾಹಾರ ತರಲು ಹೋಗಿದ್ದ ವೇಳೆ ಇಲ್ಲಿನ ಅಜ್ಜಿಕಟ್ಟಾ ಬಳಿ ಏಕಾಏಕಿ ಹೆಜ್ಜೇನು ದಾಳಿ ಮಾಡಿತ್ತು. ತೀವ್ರವಾಗಿ ಅಸ್ವಸ್ಥರಾದ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ADVERTISEMENT

ಈಚೆಗೆ ಪಟ್ಟಣದ ಬಸ್ ನಿಲ್ದಾಣದ ಬಳಿ ಹೆಜ್ಜೇನು ದಾಳಿಗೆ ಮೂವರು ಅಸ್ವಸ್ಥರಾಗಿದ್ದರು. ತಾಲ್ಲೂಕಿನಲ್ಲಿ ಜೇನುನೊಣ ದಾಳಿಯ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.