ADVERTISEMENT

ಬೆಂಕಿ ಅವಘಡ:ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 2:13 IST
Last Updated 5 ಆಗಸ್ಟ್ 2022, 2:13 IST

ಹಳಿಯಾಳ: ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರುವ ನಂದಿ ಬಸವೇಶ್ವರ ಲಿಂಗಾಯತ ಖಾನಾವಳಿ ಯಲ್ಲಿಅಡುಗೆಅನಿಲಸೋರಿಕೆ ಯಾಗಿಬೆಂಕಿಹೊತ್ತಿ ಕೊಂಡಪರಿ ಣಾ ಮಇಬ್ಬರಿಗೆಗಂ ಭೀರಸ್ವರೂಪದಗಾಯ ಗಳಾಗಿವೆ. ಖಾನಾವಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜಗದೀಶ ಮಡಿವಾಳರ ಮತ್ತು ಈರಪ್ಪಾ ಮಡ್ಡಿ ಎಂಬುವರು ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ. ಬೆಳಗಿನ ಜಾವ 4.30ಕ್ಕೆ ಘಟನೆ ನಡೆದಿದೆ. ಬೀಡಿ ಹಚ್ಚಿಕೊಳ್ಳಲು ಕಡ್ಡಿ ಗೀರಿದಾಗ ಬೆಂಕಿ ಹೊತ್ತಿಕೊಂಡಿದೆ.

ಖಾನಾವಳಿಯ ಕೆಲ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT