ಕುಮಟಾ (ಉತ್ತರ ಕನ್ನಡ): ಈಚೆಗೆ ಅಘನಾಶಿನಿ ನದಿಯ ನೆರೆಗೆ ತಾಲ್ಲೂಕಿನ ಸಂತೆಗುಳಿ ತೂಗುಸೇತುವೆ ಕೊಚ್ಚಿ ಹೋಗಿತ್ತು. ಇದರಿಂದ ಹೊರಗಿನ ಸಂಪರ್ಕ ಕಡಿದುಕೊಂಡಿದ್ದ ನಾಲ್ಕು ಗ್ರಾಮಗಳ ಜನರು, ಶ್ರಮದಾನ ಮಾಡಿದರು. ಸಮೀಪದ ಮುಂಡಗಿ ಹೊಳೆಗೆ ತಾವೇ ಕಾಲುಸಂಕ ನಿರ್ಮಿಸಿ ಅನುಕೂಲ ಮಾಡಿಕೊಂಡರು.
ಕುಮಟಾ–ಸಿದ್ದಾಪುರ ರಸ್ತೆಯ ಸಂತೆಗುಳಿ ಬಳಿ ಅಘನಾಶಿನಿ ನದಿಗೆ ಸುಮಾರು 12ವರ್ಷಗಳ ಹಿಂದೆ ತೂಗುಸೇತುವೆ ನಿರ್ಮಿಸಲಾಗಿತ್ತು. ಇದರಿಂದ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಂಡಗಿ, ಕಲವೆ, ಬಂಗಣೆ, ಮೊರಸೆ ಮುಂತಾದ ಗ್ರಾಮಗಳಿಗೆ ಸಂಪರ್ಕ ಏರ್ಪಟ್ಟಿತ್ತು. ಈಚೆಗೆಅಘನಾಶಿನಿಉಕ್ಕಿ ಹರಿದು ಬಂದ ನೆರೆಯಲ್ಲಿತೂಗು ಸೇತುವೆ ಕೊಚ್ಚಿ ಹೋಯಿತು. ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದರೂನಾಲ್ಕೂ ಗ್ರಾಮಗಳ ಜನರು ಶ್ರಮದಾನ ಮಾಡಿ ಸಾಧ್ಯವಾದ ಮಟ್ಟಿಗೆ ಪರಿಹಾರ ಕಂಡುಕೊಂಡರು.
ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಖಾದರ್ ಸಾಬ್, ‘ನಾಲ್ಕು ಗ್ರಾಮಗಳಲ್ಲಿ ಸುಮಾರು 300 ಮನೆಗಳಿವೆ. ಅಲ್ಲಿನವರುಬಿದಿರು, ಕಟ್ಟಿಗೆ, ಹಗ್ಗ ಬಳಸಿ ತಾತ್ಕಾಲಿಕ ಕಾಲು ಸೇತುವೆ ನಿರ್ಮಿಸಿಕೊಂಡಿದ್ದಾರೆ. ಇದಕ್ಕೆ ಸುಮಾರು₹ 75 ಸಾವಿರ ವೆಚ್ಚವಾಗಿಬಹುದು. ನೆರೆ ಸಂದರ್ಭದಲ್ಲಿ ಇಲ್ಲಿಗೆ ಬಂದಿದ್ದ ಶಾಸಕ ದಿನಕರ ಶೆಟ್ಟಿ ₹ 2.20 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ ಮಂಜೂರಾಗಿದೆ ಎಂದಿದ್ದಾರೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.