ಶಿರಸಿ: ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಾಲ್ಲೂಕಿನ ಭೈರುಂಬೆಯ ಸೀತಾರಾಮ ಲಕ್ಷ್ಮಿನಾರಾಯಣ ಹೆಗಡೆ (94) ಭಾನುವಾರ ನಿಧನರಾದರು. ಅವರಿಗೆ ಐವರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ. 1935–36ರ ವೇಳೆಯಲ್ಲಿ ಹೋರಾಟದ ಮುಂಚೂಣಿಯಲ್ಲಿದ್ದ ನಾಯಕರ ನಡುವೆ ಕಾಗದ ಪತ್ರಗಳನ್ನು ಪರಸ್ಪರ ತಲುಪಿಸುತ್ತ, ಸೀತಾರಾಮ ಹೆಗಡೆ ಅಂಚೆಯಣ್ಣನಂತೆ ಕೆಲಸ ಮಾಡುತ್ತಿದ್ದರು. ಒಮ್ಮೆ ಪೊಲೀಸರು ಅವರನ್ನು ಬಂಧಿಸಿದ್ದರೂ, ಅಪ್ರಾಪ್ತ ಎಂಬ ಕಾರಣಕ್ಕೆ ಜೈಲಿಗೆ ಕಳುಹಿಸಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.