ADVERTISEMENT

ಮತದಾನದ ಬಳಿಕ ಹೃದಯಾಘಾತ: ಗ್ರಾಮ ಪಂಚಾಯಿತಿ ಸದಸ್ಯ ಸಾವು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 12:25 IST
Last Updated 10 ಡಿಸೆಂಬರ್ 2021, 12:25 IST
ಲಕ್ಷ್ಮಣ ಶಿವರಾಯ ಮಾನೆ
ಲಕ್ಷ್ಮಣ ಶಿವರಾಯ ಮಾನೆ   

ಹಳಿಯಾಳ: ತಾಲ್ಲೂಕಿನ ಮುರ್ಕವಾಡ ಗ್ರಾಮ ಪಂಚಾಯಿತಿ ‌ಸದಸ್ಯರೊಬ್ಬರು ಶುಕ್ರವಾರ ವಿಧಾನಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಹೃದಯಾಘಾತದಿಂದ ನಿಧನರಾದರು.

ಲಕ್ಷ್ಮಣ ಶಿವರಾಯ ಮಾನೆ (63) ಮೃತರು. ಗ್ರಾಮ ಪಂಚಾಯಿತಿಯ ಮತಗಟ್ಟೆಯಲ್ಲಿ ಬೆಳಿಗ್ಗೆ ತಮ್ಮ ಹಕ್ಕು ಚಲಾಯಿಸಿದ್ದ ಅವರು ಮನೆಗೆ ಮರಳಿ 9.30ರ ಸುಮಾರಿಗೆ ಉಪಾಹಾರ ಸೇವಿಸಿದ್ದರು. ಆಗ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಮನೆಯವರು ಕೂಡಲೇ ಹಳಿಯಾಳದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ, ಮಾರ್ಗ ‌ಮಧ್ಯದಲ್ಲಿ ತೀವ್ರ ಹ್ರದಯಾಘಾತವಾಗಿ ಮೃತಪಟ್ಟರು ಎಂದು ಪರಿಚಯಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT