ADVERTISEMENT

ಹೊನ್ನಾವರ | ಅಪಘಾತ: ಬೈಕ್ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 13:46 IST
Last Updated 29 ಮಾರ್ಚ್ 2024, 13:46 IST
   

ಹೊನ್ನಾವರ: ಚಂದಾವರ ಸಮೀಪ ಕಣಿವೆ ಕ್ರಾಸ್‌ನಲ್ಲಿ ಗುರುವಾರ ಒಮ್ಮೆಲೇ ಅಡ್ಡಬಂದ ಕಾಡು ಹಂದಿಗಳನ್ನು ತಪ್ಪಿಸಲು ಹೋದ ಬೈಕ್ ಸವಾರ ಬಿದ್ದು ಮೃತಪಟ್ಟಿದ್ದಾರೆ.

ಕಡ್ಲೆ ಹೆಬ್ಬಾನಕೇರಿಯ ಕೂಲಿಕಾರ, ಸುಬ್ರಾಯ ಹನುಮಯ್ಯ ಮಡಿವಾಳ (57) ಮೃತಪಟ್ಟವರು.

‘ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಒಮ್ಮೆಲೇ ಅಡ್ಡಬಂದ ಕಾಡು ಹಂದಿಗಳನ್ನು ತಪ್ಪಿಸಲು ಹೋದ ಸುಬ್ರಾಯ ಮಡಿವಾಳ ಬೈಕ್‌ನಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡರು. ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.