ADVERTISEMENT

ನನ್ನನ್ನು ಮಂತ್ರಿ ಮಾಡಿ ಎಂದು ಯಾರನ್ನೂ ಕೇಳಿಲ್ಲ: ಸಚಿವ ಆರ್.ವಿ.ದೇಶಪಾಂಡೆ

‘ಸಂಪುಟದಿಂದ ನನ್ನ ಬಿಟ್ಟರೆ ವಿಶ್ರಾಂತಿ ಪಡೆಯುವೆ’

​ಪ್ರಜಾವಾಣಿ ವಾರ್ತೆ
Published 29 ಮೇ 2019, 11:33 IST
Last Updated 29 ಮೇ 2019, 11:33 IST
ಆರ್.ವಿ.ದೇಶಪಾಂಡೆ
ಆರ್.ವಿ.ದೇಶಪಾಂಡೆ   

ಕಾರವಾರ:‘ನಾನು ಈತನಕ ಯಾವುದೇ ಮುಖ್ಯಮಂತ್ರಿಯ ಮನೆಗೆಹೋಗಿನನ್ನನ್ನು ಮಂತ್ರಿ ಮಾಡಿ ಎಂದು ಕೇಳಿಲ್ಲ. ಮುಂದೆಯೂ ಕೇಳುವುದಿಲ್ಲ. ಒಂದುವೇಳೆ,ಸಚಿವ ಸಂಪುಟದಿಂದನನ್ನ ಬಿಟ್ಟರೆ ವಿಶ್ರಾಂತಿ ಪಡೆಯುತ್ತೇನೆ, ಕಾರ್ಯಕರ್ತನಾಗಿ ದುಡಿಯುತ್ತೇನೆ’ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಈ ಬಗ್ಗೆ ಎರಡೂ ಪಕ್ಷಗಳ ವರಿಷ್ಠರು ನಿರ್ಣಯ ಮಾಡಬೇಕಾಗುತ್ತದೆ. ಮಾಧ್ಯಮಗಳಲ್ಲಿ ಊಹಾಪೋಹದ ವರದಿಗಳು ಬರುತ್ತಿವೆ. ಅವು ಸತ್ಯಕ್ಕೆ ದೂರವಾದವು’ ಎಂದರು.

ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ

ADVERTISEMENT

‘ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ‌ಖಾಲಿಯಿಲ್ಲ. ಹಾಗಾಗಿ ನಾನು ಅದರ ಆಕಾಂಕ್ಷಿಯಲ್ಲ. ಸಚಿವ ಸಂಪುಟದ ಎಲ್ಲರೂ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು ಎಂದು ನಿರ್ಧಾರ ತೆಗೆದುಕೊಂಡಿದ್ದೇವೆ. ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಯಾರೂ ಮಾತನಾಡಿಲ್ಲ. ಇದನ್ನು ಕೆಲವು ಟಿ.ವಿ ಚಾನೆಲ್‌ಗಳು ಸೃಷ್ಟಿ ಮಾಡಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಲೋಕಸಭಾ ಚುನಾವಣೆಯಲ್ಲಿಎನ್‌ಡಿಎಗೆಬಹುಮತ ನೀಡಿರುವ ಜನಾಭಿಪ್ರಾಯವನ್ನುಸ್ವೀಕಾರ ಮಾಡಬೇಕು.ಇದರಿಂದ ನಾವುಪಾಠ ಕಲಿಯಬೇಕು. ಅಧಿಕಾರದಲ್ಲಿದ್ದುಕೊಂಡು ಸುಧಾರಿಸಿಕೊಳ್ಳಬೇಕು. ಮೈತ್ರಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ ಎನ್ನುವುದನ್ನು ನಾನು‌ ಒಪ್ಪುವುದಿಲ್ಲ’ ಎಂದೂ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.