ADVERTISEMENT

ಹಿರಿಯರು ತೋರಿದ ಮಾರ್ಗದಲ್ಲಿ ನಡೆದರೆ ಸತ್ಪ್ರಜೆಗಳಾಗಲು ಸಾಧ್ಯ: ಶಾಸಕ ಭೀಮಣ್ಣ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2023, 13:26 IST
Last Updated 3 ಅಕ್ಟೋಬರ್ 2023, 13:26 IST
ಸಿದ್ದಾಪುರದ ಬಾಲಭವನದಲ್ಲಿ ನಡೆದ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಹಿರಿಯ ನಿವೃತ್ತ ಹಿರಿಯ ನೌಕರರು ಮತ್ತು ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು
ಸಿದ್ದಾಪುರದ ಬಾಲಭವನದಲ್ಲಿ ನಡೆದ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಹಿರಿಯ ನಿವೃತ್ತ ಹಿರಿಯ ನೌಕರರು ಮತ್ತು ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು   

ಸಿದ್ದಾಪುರ: ‘ಹಿರಿಯರನ್ನು ಗೌರವಿಸಿ ಅವರ ಅನುಭದ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯುವ ಜನತೆ ಸತ್ಪ್ರಜೆಗಳಾಗಲು ಸಾಧ್ಯ’ ಎಂದು ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕ ಹೇಳಿದರು.

ಮಂಗಳವಾರ ಪಟ್ಟಣದ ಬಾಲಭವನದಲ್ಲಿ ತಾಲ್ಲೂಕು ನಿವೃತ್ತ ನೌಕರರ ಸಂಘದಿಂದ ಹಮ್ಮಿಕೊಂಡ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿವೃತ್ತ ಹಿರಿಯ ನೌಕರರಾದ ಅಪ್ಪಣ್ಣ ಚನ್ನ ಗಾಳಿ ಅವರಗುಪ್ಪ, ಗಣಪತಿ ಮೈಲಾ ನಾಯ್ಕ ಬೇಡ್ಕಣಿ, ಗಣಪತಿ ಈಶ್ವರ ನಾಯ್ಕ ಹೊಸೂರು ಹಾಗೂ ಹಿರಿಯ ನಾಗರಿಕರಾದ ಮುರುಗಯ್ಯ ಗೌಡರ್ ಕೋಲಸಿರ್ಸಿ, ರಾಮ ಕನ್ನ ಗಣಪನ್ ಕಾನಗೋಡ, ಶ್ರೀಧರ ಹೆಗಡೆ ಹುಲಿಮನೆ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಸಭೆಯಲ್ಲಿ ತಹಶೀಲ್ದಾರ ಎಂ.ಆರ್. ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ. ನಾಯ್ಕ, ಸಿಡಿಪಿಒ ಪೂರ್ಣಿಮಾ ಆರ್. ಇದ್ದರು.

ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್, ಗಣಪತಿ ಹೆಗಡೆ ಹುಲಿಮನೆ, ಭೂ ಮಾಪನ ಇಲಾಖೆಯ ಉಷಾ ನಾಯ್ಕ, ಜಿ.ಎಂ. ಕುಮಟಾಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.