ಶಿರಸಿ: ಮೀಸಲಾತಿ ಸಂವಿಧಾನಬದ್ಧ ಹಕ್ಕು. ಆದರೂ, ಇತ್ತೀಚಿನ ವರ್ಷಗಳಲ್ಲಿ ಜಾರಿಯಲ್ಲಿರುವ ಒಳ ಮೀಸಲಾತಿ ಎಂಬುದು ಅತಿ ಮೀಸಲಾತಿಯಾಗಿದೆ ಎಂದು ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ವ್ಯಾಖ್ಯಾನಿಸಿದರು.
ನಗರದಲ್ಲಿ ವೀರಮಾರುತಿ ದೇವಸ್ಥಾನದ ಶೃದ್ಧಾ ಸಮುದಾಯ ಭವನವನ್ನು ಸೋಮವಾರ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, 'ಮೀಸಲಾತಿ ಹಿಂದುಳಿದ ಜನಾಂಗಗಳಿಗೆ ಸ್ವಾಭಿಮಾನ ತಂದಿಕೊಟ್ಟಿದೆ. ಈಗ ಅದು ಒಳಮೀಸಲಾತಿ ಸ್ವರೂಪಕ್ಕೆ ತಿರುಗಿದ್ದು ಅತಿಯಾಗಿದೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.