ADVERTISEMENT

ಉತ್ತರ ಕನ್ನಡ | ಕೃಷಿ ಸಮ್ಮಾನ್: 1,61,531 ರೈತರಿಗೆ ಸಹಾಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 5:13 IST
Last Updated 4 ಆಗಸ್ಟ್ 2025, 5:13 IST
   

ಶಿರಸಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಕಾರಿ ಎಂದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ರೂಪಾ ಪಾಟೀಲ ಹೇಳಿದರು.

ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತಿನ ಹಣವನ್ನು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ಬಿಡುಗಡೆಗೊಳಿಸಿದ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆ ಹಾಗೂ ಪೌಷ್ಟಿಕ ಕೈ ತೋಟದ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಯೋಜನೆ ಕೇಂದ್ರ ಸರ್ಕಾರದ್ದಾಗಿದ್ದು, ಇದರ 20ನೇ ಕಂತಿನ ಆರ್ಥಿಕ ನೆರವನ್ನು ದೇಶದಾದ್ಯಂತ 9.7 ಕೋಟಿಗಿಂತಲೂ ಹೆಚ್ಚಿನ ರೈತರಿಗೆ ₹ 20,500 ಕೋಟಿ ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದರು.

ಕೃಷಿ ಉಪನಿರ್ದೇಶಕ ನಟರಾಜ ಟಿ.ಎಚ್‌. ಮಾತನಾಡಿ, ಕೃಷಿ ಸಮ್ಮಾನ್ ನಿಧಿಯ ಯೋಜನೆಯ ಲಾಭವನ್ನು ಜಿಲ್ಲೆಯ 1,61,531 ರೈತರು ಪಡೆದುಕೊಂಡಿದ್ದಾರೆ ಎಂದರು.

ADVERTISEMENT

ಸಂಜೀವಿನಿ ಎನ್‌ಆರ್‌ಎಲ್‌ಎಂ ತಾಲ್ಲೂಕು ವ್ಯವಸ್ಥಾಪಕ ಕಿರಣ ಭಟ್, ಕೆವಿಕೆ ವಿಜ್ಞಾನಿಗಳಾದ ಹರೀಶ ಡಿ.ಕೆ, ವಿಜಯಲಕ್ಷ್ಮಿ ಎಸ್. ನಾಯಕ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.