ADVERTISEMENT

ಗೋವಾ ಹವ್ಯಕ ವಲಯ: ಕುಂಕುಮಾರ್ಚನೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 11:16 IST
Last Updated 16 ಅಕ್ಟೋಬರ್ 2018, 11:16 IST
ಶರನ್ನವರಾತ್ರಿ ನಿಮಿತ್ತ ಗೋವಾ ಹವ್ಯಕ ವಲಯವು ಸಾಮೂಹಿಕ ಕುಂಕುಮಾರ್ಚನೆ ಹಮ್ಮಿಕೊಂಡಿತು
ಶರನ್ನವರಾತ್ರಿ ನಿಮಿತ್ತ ಗೋವಾ ಹವ್ಯಕ ವಲಯವು ಸಾಮೂಹಿಕ ಕುಂಕುಮಾರ್ಚನೆ ಹಮ್ಮಿಕೊಂಡಿತು   

ಕಾರವಾರ:ಶರನ್ನವರಾತ್ರಿ ನಿಮಿತ್ತ ಗೋವಾ ಹವ್ಯಕ ವಲಯವು ಹಮ್ಮಿಕೊಂಡಿದ್ದ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮವು ಮಂಗಳವಾರ ಸಂಪನ್ನವಾಯಿತು.

ಪರವರಿ ಸಮೀಪದ ಸುಕೂರಿನ ವಾಸುದೇವಾನಂದ ಸರಸ್ವತಿ ದತ್ತಮಂದಿರದ ಸಾತೇರಿ ದೇವಿಯ ಸನ್ನಿಧಾನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ 50ಕ್ಕೂ ಹೆಚ್ಚು ಸುಮಂಗಲಿಯರು ಲಲಿತಾ ಸಹಸ್ರನಾಮ ಪಠಿಸುತ್ತ ಕುಂಕುಮಾರ್ಚನೆ ನೆರವೇರಿಸಿದರು.

ದೇವಾಲಯದ ಅರ್ಚಕ ಕೃಷ್ಣ ಭಟ್ ಹಾಗೂ ವಲಯದ ಮಾತೃ ವಿಭಾಗ ಪ್ರಧಾನರಾದ ಮಮತಾ ಹೆಗಡೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮಂತ್ರ ಪಠಣ, ಭಜನೆ ರಾಮಾಯಣ, ಆದಿತ್ಯ ಹೃದಯ ಮುಂತಾದ ಸ್ತೋತ್ರಗಳ ಪಠಣ ಹಾಗೂ ಭಜನೆ ಕಾರ್ಯಕ್ರಮಗಳನ್ನೂ ನೆರವೇರಿಸಲಾಯಿತು. ವಲಯದ ಗುರಿಕಾರರು ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.