ADVERTISEMENT

ಮುರಿದು ಬಿದ್ದ ಕಿರು ಸೇತುವೆ: ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 13:41 IST
Last Updated 23 ಏಪ್ರಿಲ್ 2020, 13:41 IST
ಗೋಕರ್ಣದ ಮೀನು ಪೇಟೆ ಹಿಂಬದಿಯ ನಾಲೆಗೆ ನಿರ್ಮಿಸಲಾಗಿದ್ದ ಹಳೆಯ ಕಿರು ಸೇತುವೆ ಗುರುವಾರ ಮುರಿದು ಬಿದ್ದಿರುವುದು
ಗೋಕರ್ಣದ ಮೀನು ಪೇಟೆ ಹಿಂಬದಿಯ ನಾಲೆಗೆ ನಿರ್ಮಿಸಲಾಗಿದ್ದ ಹಳೆಯ ಕಿರು ಸೇತುವೆ ಗುರುವಾರ ಮುರಿದು ಬಿದ್ದಿರುವುದು   

ಗೋಕರ್ಣ: ಇಲ್ಲಿನ ಮೀನು ಪೇಟೆಯ ಹಿಂಬದಿಯಿರುವನಾಲೆಯಹಳೇಕಿರು ಸೇತುವೆ ಗುರುವಾರ ಮುರಿದುಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಹೊಸ ಸೇತುವೆ ಸಲುವಾಗಿ ಅದನ್ನು ತೆರವು ಮಾಡುತ್ತಿದ್ದಾಗ ದುರ್ಘಟನೆ ನಡೆದಿದೆ.

ಸಮೀಪದತಾರಮಕ್ಕಿಯ ನಿವಾಸಿ ನಾರಾಯಣ ಗುರವಾ ಗೌಡ (46) ಮೃತರು.

ಹಳೆಯ ಕಿರು ಸೇತುವೆಯನ್ನುಜನರು ನಡೆದುಕೊಂಡು ಹೋಗಲು ಬಳಸುತ್ತಿದ್ದರು. ಅದು ಶಿಥಿಲಾವಸ್ಥೆಗೆ ಬಂದಿದ್ದ ಕಾರಣ ಹೊಸ ಸೇತುವೆಯ ಕಾಮಗಾರಿಯನ್ನು ಗ್ರಾಮ ಪಂಚಾಯ್ತಿ ಆರಂಭಿಸಿತ್ತು. ಕಾರ್ಮಿಕರು ದಿನದಕೆಲಸ ಮುಗಿಸಿ ಮನೆಗೆ ಹೊರಡಲು ಕೆಲವೇ ಸಮಯವಿದ್ದಾಗದುರ್ಘಟನೆ ನಡೆದಿದೆ.

ADVERTISEMENT

ಘಟನಾ ಸ್ಥಳದಲ್ಲಿಒಟ್ಟು ಐವರುಕೆಲಸ ಮಾಡುತ್ತಿದ್ದರು. ಹಳೆಯ ಸೇತುವೆಯನ್ನು ತೆರವು ಮಾಡುತ್ತಿದ್ದಾಗಅದರ ಒಂದು ಭಾಗ ಅಕಸ್ಮಾತ್ ತುಂಡಾಗಿ ನಾರಾಯಣ ಕೆಳಗೆ ಬಿದ್ದರು. ಅವರ ಮೇಲೆ ಸೇತುವೆಯ ಉಳಿದ ಭಾಗವೂಬಿದ್ದ ಪರಿಣಾಮ ಮೇಲೇಳಲುಸಾಧ್ಯವಾಗಲಿಲ್ಲ.ಅವಶೇಷದಕೆಳಗೆ ಸಿಲುಕಿದ್ದ ಅವರನ್ನುಕೂಡಲೇ ಮೇಲೆತ್ತಿಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.

ಸೌಮ್ಯ ಸ್ವಭಾವದವರಾಗಿದ್ದ ಅವರು ಪ್ರಾಮಾಣಿಕ ಕೆಲಸಗಾರ ಎಂದು ಎಲ್ಲರಿಗೂ ಪರಿಚಿತರಾಗಿದ್ದರು. ಅವರಿಗೆ ‍ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳಿದ್ದಾರೆ.

ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿ.ಎಸ್.ಐ ನವೀನ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.