ADVERTISEMENT

ಗಾಯಾಳು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ಸಚಿವ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 4:35 IST
Last Updated 2 ಮಾರ್ಚ್ 2021, 4:35 IST
1ಕೆಎಂಟಿ3ಇಪಿ : ಕುಮಟಾ ತಾಲ್ಲೂಕಿನ ಹೊಳೆಗದ್ದೆ ರಾಷ್ಟ್ರೀಯ ಹೆದ್ದಾರಿ ಟೋಲ್ ನಾಕಾ ಬಳಿ ಬೈಕ್ ಉರುಳಿ ಬಿದ್ದಾಗ ಗಾಯಗೊಂಡ ಎರಡೂವರೆ ವರ್ಷದ ಮಗುವನ್ನು ಅಂಬುಲೆನ್ಸ್ ನಲ್ಲಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು.
1ಕೆಎಂಟಿ3ಇಪಿ : ಕುಮಟಾ ತಾಲ್ಲೂಕಿನ ಹೊಳೆಗದ್ದೆ ರಾಷ್ಟ್ರೀಯ ಹೆದ್ದಾರಿ ಟೋಲ್ ನಾಕಾ ಬಳಿ ಬೈಕ್ ಉರುಳಿ ಬಿದ್ದಾಗ ಗಾಯಗೊಂಡ ಎರಡೂವರೆ ವರ್ಷದ ಮಗುವನ್ನು ಅಂಬುಲೆನ್ಸ್ ನಲ್ಲಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು.   

ಕುಮಟಾ: ಅಪಘಾತದಲ್ಲಿ ಗಾಯಗೊಂಡಿದ್ದ ಮಗುವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪಟ್ಟಣದ ಮನ್ಸೂರ್ ರಫೀಕ್ ಶೇಖ್ ದಂಪತಿ ತಮ್ಮ ಸಹೋದರನ ಎರಡೂವರೆ ವರ್ಷದ ಮಗು ಜಾಫರ್ ಶೇಖ್ ಹೊನ್ನಾವರದಿಂದ
ಕುಮಟಾಕ್ಕೆ ಸೋಮವಾರ ಬರುವಾಗ ಹೊಳೆಗದ್ದೆ ಟೋಲ್ ನಾಕಾ ಬಳಿ ಎದುರು ನಾಯಿ ಅಡ್ಡ ಬಂದಿದ್ದರಿಂದ ಬೈಕ್ ಉರುಳಿ ಕೆಳಗೆ ಬಿದ್ದರು. ಆಗ ಮಗುವಿಗೆ ಹೆಚ್ಚಿನ ಗಾಯವಾಯಿತು.

ಅವರ ಹಿಂದೆಯೇ ಕಾರಿನಲ್ಲಿ ಬರುತ್ತಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಕ್ಷಣ ಮಗುವಿನ ಸಹಾಯಕ್ಕೆ ಧಾವಿಸಿ ಟೋಲ್ ಗೇಟ್ ಬಳಿ ಇದ್ದ ಆಂಬುಲೆನ್ಸ್ ಮೂಲಕ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.