ಭಟ್ಕಳ: ಇಲ್ಲಿನ ಪುರಸಭೆ ವತಿಯಿಂದ ಶನಿವಾರ ಪುರಸಭೆ ಕಚೇರಿಯ ಹೊರಾಂಗಣದಲ್ಲಿ ಆಯೋಜಿಸಿದ್ದ ನನ್ನ ಲೈಫ್, ನನ್ನ ಸ್ವಚ್ಛ ನಗರ ಅಭಿಯಾನಕ್ಕೆ ಭಟ್ಕಳ ಉಪವಿಭಾಗಾಧಿಕಾರಿ ಮಮತಾ ದೇವಿ ಚಾಲನೆ ನೀಡಿದರು.
ಸ್ವಚ್ಛತೆ ಜಾಗೃತಿಯ ಜೊತೆಗೆ ವಿದ್ಯಾರ್ಥಿಗಳಿಗೆ ನೆರವಾಗಲು ಈ ಯೋಜನೆ ರೂಪಿಸಲಾಗಿದೆ. ಘನತ್ಯಾಜ್ಯ ವಸ್ತುಗಳು ವಿಲೇವಾರಿ ಘಟಕಕ್ಕೆ ಹೋಗುವ ಮುಂಚೆಯೇ ಬಳಕೆ ಮಾಡಲು ಯೋಗ್ಯವಾಗಿದ್ದರೆ ಅದನ್ನು ಬಳಕೆ ಮಾಡಲಾಗುವುದು. ಕಸ ಸಂಗ್ರಹಣೆ ವೇಳೆ ಮಕ್ಕಳು ಓದಿ ಮುಗಿಸಿ ಹಾಗೆಯೇ ಇಟ್ಟಿರುವ ಪುಸ್ತಕ ಮತ್ತು ಆಟಿಕೆಗಳನ್ನು ಪಡೆದುಕೊಂಡು ಅಗತ್ಯ ಇರುವ ಮಕ್ಕಳಿಗೆ ನೀಡಲಾಗುವುದು ಎಂದರು.
ಪುರಸಭೆ ಉಪಾಧ್ಯಕ್ಷ ಕೈಸರ್ ಮೊಹತಿಶ್ಯಾಂ, ಸ್ಥಾಯಿ ಸಮಿತಿ ಅಧ್ಯಕ್ಷ ಅಜೀಜುರೆಹಮಾನ್, ಪುರಸಭೆ ಆರೋಗ್ಯಾಧಿಕಾರಿ ಸೋಜಿಯಾ ಸೋಮನ್, ಸಿಬ್ಬಂದಿ ಕಿರಣ, ಗಣೇಶ ಭಟ್ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.