ಶಿರಸಿ: ಇಲ್ಲಿನ ಗಾಂಧಿನಗರದಲ್ಲಿರುವ ಪ್ರೊಗ್ರೆಸ್ಸಿವ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ನೂತನ ಸದಸ್ಯರ ಆಯ್ಕೆಗೆ ಬುಧವಾರ ಚುನಾವಣೆ ನಡೆಯಿತು. ಹದಿಮೂರು ಸದಸ್ಯ ಸ್ಥಾನಕ್ಕೆ ಹದಿನೈದು ಮಂದಿ ಸ್ಪರ್ಧಿಸಿದ್ದರು.
ಒಟ್ಟೂ ಸದಸ್ಯರ ಪೈಕಿ ಶೇ.79.60 ಮಂದಿ ಮತ ಚಲಾಯಿಸಿದ್ದರು. ಕಡಿಮೆ ಮತ ಪಡೆದ ವಸಂತ್ ನೆತ್ರೇಕರ್ ಮತ್ತು ಜಗನ್ನಾಥ್ ಭಟ್ಕಳ ಪರಾಭವಗೊಂಡರು.
ಆಡಳಿತ ಮಂಡಳಿಗೆ ಈಶ್ವರ ಸಿ.ನಾಯ್ಕ, ಜಿ.ಜಿ.ಹೆಗಡೆ ಕಡೆಕೋಡಿ, ಚಂದ್ರಶೇಖರ ಶಿವನಂಚಿ, ಪರಮಾನಂದ ಹೆಗಡೆ, ಮಂಜುನಾಥ ಎನ್.ಹೆಗಡೆ, ಮೋಹಿನಿ ಎಂ.ಬೈಲೂರ, ರಮೇಶ ಎನ್.ದುಬಾಶಿ, ರಾಜಾರಾಮ ಕೆ.ಹೆಗಡೆ, ವಿಶ್ವನಾಥ ಜಿ.ಭಟ್ಟ, ಶಾಂತಾ ಎನ್.ಬಾರಕೂರ, ಸುಮಾ ಆರ್.ಉಗ್ರಾಣಕರ, ಸೂರಜರಾಣಿ ಎಂ.ಪ್ರಭು, ಹರೀಶ ಎನ್.ಪಂಡಿತ ಆಯ್ಕೆಯಾದರು. ಆಯ್.ಪಿ.ಹೆಗಡೆ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.