ಹಳಿಯಾಳ: ತಾಲ್ಲೂಕಿನಾದ್ಯಂತ ಮಳೆಯಿಂದ ಶುಕ್ರವಾರ ಗ್ರಾಮೀಣ ಭಾಗದ ತೇರಗಾಂವ ಗ್ರಾಮದಲ್ಲಿ ಒಂದು ಮನೆ ಗೋಡೆ, ಶಿವಪುರ ಗ್ರಾಮದ ಎರಡು ಮನೆ ಗೋಡೆಗಳು ಬಿದ್ದು ಹಾನಿಯಾಗಿವೆ.
ಈವರೆಗೆ ಸುಮಾರು ಹಳಿಯಾಳ ತಾಲ್ಲೂಕಿನಾದ್ಯಂತ 30ಕ್ಕೂ ಹೆಚ್ಚು ಮನೆಗಳ ಗೋಡೆ ಬಿದ್ದು ಹಾನಿಯಾಗಿದೆ.
ತೇರಗಾಂವ ಗ್ರಾಮದ ವೀರಭದ್ರ ಮಾರುತಿ ಕುಂಬಾರ, ರೂಪಾ ಕಲ್ಲಪ್ಪಾ ಮಾಯಣ್ಣವರ್, ಶಿವಪುರ ಗ್ರಾಮದ ಬಸಪ್ಪಾ ಸಿದ್ದಪ್ಪಾ ಕರಪೂರ ಅವರ ಮನೆ ಗೋಡೆ ಬಿದ್ದು ಹಾನಿಯಾಗಿದೆ. ಪರಿಹಾರ ಕಾರ್ಯದ ಬಗ್ಗೆ ಕಂದಾಯ ಇಲಾಖಾಧಿಕಾರಿ ಪರಿಶೀಲನೆ ಕೈಗೊಂಡಿದ್ದಾರೆ.
ಹಳಿಯಾಳದಲ್ಲಿ ಇಲ್ಲಿಯವರೆಗೆ 8.77 ಸೆಂ.ಮೀ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.