ADVERTISEMENT

ಆರ್‌ಎಸ್‌ಎಸ್ ಪ್ರಮುಖ ಮಂಗೇಶ ಭೆಂಡೆ ಕಾರು ಅಪಘಾತ: ಅಪಾಯದಿಂದ ಪಾರು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2022, 8:41 IST
Last Updated 30 ಆಗಸ್ಟ್ 2022, 8:41 IST
   

ಯಲ್ಲಾಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೆಂಡೆ ಅವರ ಕಾರು ಹಾಗೂ ಮತ್ತೊಂದು ಕಾರು,ತಾಲ್ಲೂಕಿನ ಬಿಸಗೋಡ ಕ್ರಾಸ್‌ ಬಳಿ ಮಂಗಳವಾರ ಮುಖಾಮುಖಿ ಡಿಕ್ಕಿಯಾಗಿವೆ.

ಎರಡೂ ಕಾರುಗಳಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಹುಬ್ಬಳ್ಳಿಯಿಂದ ಅಂಕೋಲಾ ಕಡೆಗೆ ಹೊರಟಿದ್ದ ಮಂಗೇಶ ಅವರ ಕಾರಿಗೆ, ಶಿರಸಿಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ದರ್ಶನ ಎಂಬುವವರ ಕಾರು ಡಿಕ್ಕಿಯಾಯಿತು.

ನಾಗಪುರದ ಆರ್.ಎಸ್.ಎಸ್. ಕೇಂದ್ರ ಸ್ಥಾನದಲ್ಲಿರುವ ಮಂಗೇಶ, ಗಣೇಶ ಚತುರ್ಥಿ ನಿಮಿತ್ತ ತಮ್ಮ ಊರಾದ ಅಂಕೋಲಾಕ್ಕೆ ತೆರಳುತ್ತಿದ್ದರು. ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಉಪಚಾರದ ನಂತರ ಬೇರೆ ಕಾರಿನಲ್ಲಿ ಅಂಕೋಲಾಕ್ಕೆ ಪ್ರಯಾಣ ಮುಂದುವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.