ADVERTISEMENT

ಕಾರವಾರದಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿ: ಸತೀಶ ಸೈಲ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 12:26 IST
Last Updated 4 ಜೂನ್ 2020, 12:26 IST
ಸತೀಶ ಸೈಲ್
ಸತೀಶ ಸೈಲ್   

ಕಾರವಾರ:ಗೋವಾದಲ್ಲಿ ಕೆಲಸ ಮಾಡುವ ಕಾರವಾರದ ಕಾರ್ಮಿಕರಿಗೆ ಕೋವಿಡ್ 19ಪರೀಕ್ಷೆಯನ್ನು ಕಾರವಾರದ ವಿಜ್ಞಾನಗಳ ಸಂಸ್ಥೆಯಲ್ಲೇ ಮಾಡಬೇಕು ಎಂದು ಕಾಂಗ್ರೆಸ್ ಟಾಸ್ಕ್‌ಫೋರ್ಸ್ ಜಿಲ್ಲಾ ಸಮಿತಿಯ ಅಧ್ಯಕ್ಷ ಸತೀಶ ಸೈಲ್ಒತ್ತಾಯಿಸಿದ್ದಾರೆ.

ಹೊರ ರಾಜ್ಯಗಳಿಂದಗೋವಾಕ್ಕೆ ಉದ್ಯೋಗಕ್ಕಾಗಿ ಬರುವವರು ಅಲ್ಲಿನ ಸರ್ಕಾರದ ಆದೇಶದಂತೆ ತಮ್ಮ ಕೋವಿಡ್ 19 ನೆಗೆಟಿವ್ ವರದಿಯನ್ನುರಾಜ್ಯದಗಡಿಯಲ್ಲೇಹಾಜರುಪಡಿಸಬೇಕು. ಇದಕ್ಕೆ ತಪ್ಪಿದರೆ ₹ 2,000 ಪಾವತಿಸಿ ಗೋವಾ ರಾಜ್ಯದ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ನೌಕರಿಗೆ ತೆರಳಬೇಕಾಗಿದೆ. ಇದರಿಂದ ಬಡ ಕಾರ್ಮಿಕರಿಗೆ ಆರ್ಥಿಕವಾಗಿ ತುಂಬ ಹೊರೆಯಾಗುತ್ತಿದೆ. ಈಗಾಗಲೇ ಹಲವಾರು ನೌಕರರು ಈ ರೀತಿ ಹಣ ಪಾವತಿಸಿಪರೀಕ್ಷೆ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಕೆಲವು ನೌಕರರನ್ನು ಈ ಪರೀಕ್ಷೆಗಾಗಿ ‘ಕ್ರಿಮ್ಸ್’ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ,ಆಡಳಿತಾತ್ಮಕ ಕಾರಣ ನೀಡಿ ಅವರ ಕೋರಿಕೆಯನ್ನು ನಿರಾಕರಿಸಲಾಗಿತ್ತು. ಈಪರೀಕ್ಷೆಯು ಕೇವಲಶಿಷ್ಟಾಚಾರದಪ್ರಕಾರವೇ ನಡೆಯುವುದಾದರೆ ಜಿಲ್ಲೆಗೆ ಹೆಚ್ಚಿನ ಪ್ರಯೋಜನವಿಲ್ಲ. ಸಂಬಂಧಿತ ಸಿಬ್ಬಂದಿಗೆ ಹೆಚ್ಚು ಒತ್ತಡ ಬೀಳದ ಹಾಗೆ ದಿನಾ ನಿರ್ದಿಷ್ಟ ಸಂಖ್ಯೆಯಷ್ಟು ಮಂದಿಗೆ ಕೈಗೆಟಕುವ ಶುಲ್ಕದಲ್ಲಿಪರೀಕ್ಷೆಮಾಡಿಸಿ ವರದಿ ನೀಡುವಂತೆ ಸರ್ಕಾರ ತನ್ನ ನಿಬಂಧನೆಯಲ್ಲಿ ಸೂಕ್ತ ಬದಲಾವಣೆ ಮಾಡಲು ಮುಂದಾಗಬೇಕು ಎಂದು ಅವರು ಪ್ರಕಟಣೆಯಲ್ಲಿಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.