ಕಾರವಾರ: ತಾಲ್ಲೂಕಿನ ವೈಲವಾಡ ಗ್ರಾಮದ ಖಾರ್ಗಾದಲ್ಲಿ ಎತ್ತರದ ಗುಡ್ಡದಿಂದ ಬಿದ್ದ ಸಾಂಬಾರ ಜಿಂಕೆಯೊಂದು ಬುಧವಾರ ಮೃತಪಟ್ಟಿದೆ.
ಅದಕ್ಕೆ ಸುಮಾರು ಒಂದು ವರ್ಷ ಪ್ರಾಯವಾಗಿತ್ತು. ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ಮಾಡಲಾಗಿದೆ.ಹೆಚ್ಚಿನ ವಿವರಗಳಿಗೆ ತನಿಖೆ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಿ.ಸಿ.ಎಫ್ ವಸಂತ ರೆಡ್ಡಿ, ಎ.ಸಿ.ಎಫ್ ವಸಂತ ನಾವಿ, ಆರ್.ಎಫ್.ಒ ಜಿ.ವಿ.ನಾಯ್ಕ ಮತ್ತು ಅವರ ತಂಡದ ಸದಸ್ಯರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.