ಜೊಯಿಡಾ:ತಾಲ್ಲೂಕಿನ ಕುಂಬಾರವಾಡಾದಲ್ಲಿ ಮಂಗಳವಾರ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕುದುರೆ ಮೇಲೆ ಕುಳಿತಿರುವ ಮಾದರಿಯ ಶಿವಾಜಿ ಮಹಾರಾಜರ ಪುತ್ಥಳಿಗೆ ಪ್ರಮುಖರು ಮಾಲಾರ್ಪಣೆ ಮಾಡಿದರು. ನಂತರ ಕುಂಬಾರವಾಡಾ ಹಾಗೂ ನೆರೆಯ ಗ್ರಾಮಗಳ ಸಾರ್ವಜನಿಕರು ಶ್ರೀ ಕ್ಷೇತ್ರಪಾಲ ದೇವಸ್ಥಾನದವರೆಗೆ, ಅಲ್ಲಿಂದ ಮಹಾಸತಿ ಗುಡಿಯವರೆಗೆಬೈಕ್ ರ್ಯಾಲಿಹಮ್ಮಿಕೊಂಡರು. ಸಾರ್ವಜನಿಕರಿಗೆಉಪಾಹಾರದ ವ್ಯವಸ್ಥೆಮಾಡಲಾಗಿತ್ತು.
ಈ ಸಂದರ್ಭದಲ್ಲಿ ಪುರುಷೋತ್ತಮ ಕಾಮತ್, ರತ್ನಾಕರ ದೇಸಾಯಿ, ಪ್ರವೀಣ ನಾಯ್ಕ, ಚಂದ್ರಕಾಂತ ದೇಸಾಯಿ, ರಂಜಿತ್ ದೇಸಾಯಿ ಹಾಗೂ ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.