ADVERTISEMENT

ಶಿರಸಿ, ಜೊಯಿಡಾದಲ್ಲಿ ಚುರುಕಾದ ಮಳೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 5:19 IST
Last Updated 19 ಜುಲೈ 2023, 5:19 IST
ಶಿರಸಿ ಭಾಗದಲ್ಲಿ ಮಳೆ ಚುರುಕಾದ ಪರಿಣಾಮ ಭತ್ತದ ಗದ್ದೆಯಲ್ಲಿ ನಾಟಿಗೆ ಸಜ್ಜಾಗಿರುವ ಕೂಲಿ ಕಾರ್ಮಿಕರು 
ಶಿರಸಿ ಭಾಗದಲ್ಲಿ ಮಳೆ ಚುರುಕಾದ ಪರಿಣಾಮ ಭತ್ತದ ಗದ್ದೆಯಲ್ಲಿ ನಾಟಿಗೆ ಸಜ್ಜಾಗಿರುವ ಕೂಲಿ ಕಾರ್ಮಿಕರು    

ಶಿರಸಿ: ತಾಲ್ಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಸೋಮವಾರ ರಾತ್ರಿ, ಮಂಗಳವಾರ ಇಡೀ ದಿನ ಉತ್ತಮ ಮಳೆಯಾಗಿದ್ದು, ಜಲಮೂಲಗಳು ಭರ್ತಿಯಾಗುತ್ತಿವೆ.

ವಾರದಿಂದೀಚೆ ಚುರುಕಾಗಿದ್ದ ಮಳೆ ಮಂಗಳವಾರ ಮತ್ತಷ್ಟು ಜೋರಾಗಿತ್ತು. ಇದರಿಂದ ಇಡೀ ದಿನ ಮಳೆ ಸುರಿಯಿತು. ಸೋಂದಾ, ಹುಲೇಕಲ್, ವಾನಳ್ಳಿ, ಸಾಲಕಣಿ ಭಾಗದಲ್ಲಿ ಮಳೆ ಸುರಿದ ಕಾರಣ ಕೃಷಿ ಚಟುವಟಿಕೆ ಜೋರಾಗಿ ನಡೆಯಿತು.

ಭತ್ತ ಬೆಳೆಗಾರರು ಸಂಭ್ರಮದಿಂದ ನಾಟಿ ಕಾರ್ಯ ನಡೆಸಿದರು. ಇನ್ನೂ ಕೆಲ ಭಾಗದಲ್ಲಿ ರಭಸದ ಗಾಳಿಯೂ ಮಳೆಗೆ ಸಾಥ್ ನೀಡಿದ್ದು, ಚಿಕ್ಕಪುಟ್ಟ ಹಾನಿ ಸಂಭವಿಸಿದೆ. ನಗರ ಸಮೀಪದ ಪಟ್ಟನಮನೆ ಗ್ರಾಮದ ಮಹಮ್ಮದ್ ಅಲಿ ಅವರ ಅಡುಗೆ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ₹ 30 ಸಾವಿರ ಹಾನಿ ಅಂದಾಜಿಸಲಾಗಿದೆ. ಕಂದಾಯ ಸಿಬ್ಬಂದಿ ಸ್ಥಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

ADVERTISEMENT

ಜೊಯಿಡಾ ವರದಿ

ಜೊಯಿಡಾ: ತಾಲ್ಲೂಕಿನಲ್ಲಿ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ನದಿ ಹಳ್ಳಗಳು ತುಂಬಿ ಹರಿಯುತ್ತಿವೆ.

ತಾಲ್ಲೂಕಿನಲ್ಲಿ 48 ಗಂಟೆಗಳಲ್ಲಿ 83 ಮಿಮೀ., ಮಳೆಯಾಗಿದ್ದು, ಅಣಶಿ, ಕ್ಯಾಸಲ್ ರಾಕ್, ಉಳವಿ, ಗುಂದ ಹಾಗೂ ತೇರಾಳಿ ಭಾಗಗಳಲ್ಲಿ ಮಳೆಯಿಂದ ವಿದ್ಯುತ್ ಸಮಸ್ಯೆ ಉಂಟಾಗಿದೆ.

ತಾಲ್ಲೂಕಿನಲ್ಲಿ ಕುಡಿಯಲು ಹಾಗೂ ಕೃಷಿಗೆ ಝರಿಗಳೆ ನೀರಿನ ಮೂಲವಾಗಿದ್ದು ಪ್ರತಿ ವರ್ಷ ಜುಲೈ ಮೊದಲ ವಾರದಲ್ಲಿ ಹರಿಯುತ್ತಿತ್ತು. ಆದರೆ ಈ ವರ್ಷ ಇನ್ನೂ ಝರಿಗಳು ಹರಿಯುತ್ತಿಲ್ಲ. ಹೀಗೆ ಗಾಳಿ ಸಹಿತ ಮಳೆ ಸುರಿದರೆ ಝರಿಗಳು ಹರಿಯಬಹುದು. ನೀರಿನ ಸಮಸ್ಯೆ ಪರಿಹಾರವಾಗಬಹುದು ಎನ್ನುತ್ತಾರೆ ಜೊಯಿಡಾದ ಹಿರಿಯ ಮಹಾದೇವ ಗಾವಡಾ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.