ADVERTISEMENT

ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಅಗತ್ಯ: ಶಿವಾನಂದ ನಾಯಕ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 13:53 IST
Last Updated 10 ಸೆಪ್ಟೆಂಬರ್ 2024, 13:53 IST
ಅಂಕೋಲಾದ ಪಿ.ಎಂ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಮಿತಿ ಸದಸ್ಯ ಶಿವಾನಂದ ನಾಯಕ ಉದ್ಘಾಟಿಸಿದರು
ಅಂಕೋಲಾದ ಪಿ.ಎಂ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಮಿತಿ ಸದಸ್ಯ ಶಿವಾನಂದ ನಾಯಕ ಉದ್ಘಾಟಿಸಿದರು   

ಅಂಕೋಲಾ: ‘ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಅಮೂಲ್ಯ ಸಂಪತ್ತು. ಅಂತಹ ಸಂಪತ್ತಿನ ಗಳಿಕೆಯೇ ವಿದ್ಯಾರ್ಥಿ ಜೀವನದ ಧ್ಯೇಯವಾಗಿರಬೇಕು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಮಿತಿ ಸದಸ್ಯ ಶಿವಾನಂದ ನಾಯಕ ಹೇಳಿದರು.

ಪಟ್ಟಣದ ಪಿ.ಎಂ.ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಯೂನಿಯನ್ ಜಿಮಖಾನಾ ಹಾಗೂ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕುಮಟಾದ ನಿವೃತ್ತ ಯೋಧ ಮಂಜುನಾಥ ಪಟಗಾರ, ‘ವಿದ್ಯಾರ್ಥಿ ಜೀವನದಲ್ಲಿಯೇ ಭವಿಷ್ಯದ ಬದುಕಿನ ಗುರಿ ಇಲ್ಲದಿದ್ದರೆ ಕಲಿಕೆ ವ್ಯರ್ಥ. ಯೋಧನಾಗಿ ದೇಶ ಸೇವೆಗೆ ಆಯ್ಕೆಯಾದ ಸಂದರ್ಭ ಮತ್ತು ಅದರಿಂದಲೇ ಇಪ್ಪತ್ತಕ್ಕೂ ಹೆಚ್ಚು ರಾಜ್ಯಗಳ ಭಾಷೆ, ಸಂಸ್ಕೃತಿಯ ಅರಿವಿನ ಅನುಭವ ಪಡೆಯಲು ಸಾಧ್ಯವಾಯಿತು’ ಎಂದರು.

ADVERTISEMENT

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಕೆ.ನಾಯ್ಕ ಮಾತನಾಡಿದರು. ಪ್ರಾಚಾರ್ಯ ಫಾಲ್ಗುಣ ಗೌಡ, ಉಪನ್ಯಾಸಕರಾದ ರಮಾನಂದ ನಾಯಕ, ಉಲ್ಲಾಸ ಹುದ್ದಾರ, ಶ್ರೀನಿವಾಸ ಯು.ಕೆ, ರಮೇಶ್ ಗೌಡ ಎಂ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಭಾಗೀರಥಿ ಹೆಗಡೆಕಟ್ಟೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.