ADVERTISEMENT

ದಾಂಡೇಲಿ: ಕಳವು ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 14:47 IST
Last Updated 3 ಜೂನ್ 2020, 14:47 IST
ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಬುಧವಾರ ಬಂಧಿಸಿದರು
ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಬುಧವಾರ ಬಂಧಿಸಿದರು   

ಕಾರವಾರ: ಕಳವು ಪ್ರಕರಣದ ಆರೋಪಿಯೊಬ್ಬನನ್ನು ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ದಾಂಡೇಲಿಯಡಬ್ಲ್ಯು.ಸಿ.ಪಿ.ಎಂ. ಸ್ಟಾಫ್ ಕ್ವಾರ್ಟರ್ಸ್ ನಿವಾಸಿ, ಕೂಲಿ ಕೆಲಸ ಮಾಡುತ್ತಿದ್ದಕುಮಾರ ದೊಡ್ಮನಿ (24) ಬಂಧಿತ ಆರೋಪಿ.

ಆತನಿಂದ ಎರಡು ಟಿ.ವಿ.ಗಳು ಒಂದು ಫ್ರಿಜ್, ಒಂದು ಗಾದಿ, ಒಂದು ಟೀಪಾಯಿ, ನಾಲ್ಕು ಹೊದಿಕೆಗಳು, ನಾಲ್ಕು ತಲೆದಿಂಬುಗಳನ್ನು ಜಪ್ತಿ ಮಾಡಿದ್ದಾರೆ. ಇವುಗಳ ಅಂದಾಜು ಮೌಲ್ಯ ₹ 50 ಸಾವಿರ ಎಂದು ಪೊಲೀಸರು ತಿಳಿಸಿದ್ದಾರೆ.

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ತಂಡ ರಚಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಸೂಚಿಸಿದ್ದರು.ದಾಂಡೇಲಿ ಉಪ ವಿಭಾಗದ ಡಿ.ವೈ.ಎಸ್‍.ಪಿ ಪಿ.ಮೋಹನ ಪ್ರಸಾದ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಲಾಗಿತ್ತು.

ADVERTISEMENT

ಸಿ.ಪಿ.ಐ ಪ್ರಭು ಆರ್ ಗಂಗನಹಳ್ಳಿ ನೇತೃತ್ವದತಂಡದಲ್ಲಿ ಪಿ.ಎಸ್.ಐ ಹಣಮಂತ ಬಿರಾದಾರ, ಎ.ಎಸ್.ಐ ಮಹಾವೀರ ಕಾಂಬಳೆ, ಹೆಡ್ ಕಾನ್‌ಸ್ಟೆಬಲ್‌ಗಳಾದಗಂಗಾಧರ ಹನಕನಹಳ್ಳಿ, ಅಶೋಕ ಮೋರೆ, ಸುಧೀರನಾಯ್ಕ, ಅನಿಲ ಸಾವಂತ ಮತ್ತು ಸಿಬ್ಬಂದಿಗ ಮಂಜುನಾಥ ಎಚ್.ಶೆಟ್ಟಿ, ರಾಮಪ್ಪ ಬಂಕಾಪುರ, ರೋಹಿತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.