ಕಾರವಾರ: ಅಲ್ಲಿ ಸ್ವಯಂವರ ಏರ್ಪಡಿಸಲಾಗಿತ್ತು. ಶಿವಧನುಸ್ಸನ್ನು ಎತ್ತಿ ಮುರಿದವನ ಜೊತೆ ಮದುವೆಯಾಗುವುದಾಗಿ ವಧು ಹೇಳಿದ್ದಳು. ಕೆಲವು ಯುವಕರು ಧನುಸ್ಸನ್ನು ಎತ್ತಲು ಪ್ರಯತ್ನಿಸಿ ಸೋತರು. ಕೊನೆಗೆ ಬಂದ ಗಟ್ಟಿಮುಟ್ಟಾದ ಯುವಕ, ಸ್ಪರ್ಧೆಯನ್ನು ಗೆದ್ದ. ಜೊತೆಗೆವಧುವಿನ ಹೃದಯವನ್ನೂ ಕದ್ದ. ಅವನಕೊರಳಿಗೆ ಆಕೆಹೂಮಾಲೆ ಹಾಕಿದಳು!
ಇದು ಕುಮಟಾ ತಾಲ್ಲೂಕಿನ ಗೋಕರ್ಣದಲ್ಲಿಮೇ 19ರಂದುನಡೆದವಿವಾಹ ಸಮಾರಂಭವೊಂದರಲ್ಲಿ ಕಂಡುಬಂದ ಸನ್ನಿವೇಶಗಳು. ಗೋಕರ್ಣದಭದ್ರಕಾಳಿ ದೇವಸ್ಥಾನದ ಅರ್ಚಕ ಶ್ರೀಧರ್ ಗೋವಿಂದ ಭಟ್ ಹಾಗೂ ಮಮತಾ ದಂಪತಿಯ ಪುತ್ರಿ ನಿಶಾ ಅವರ ಮದುವೆಯನ್ನು ಅದೇ ಗ್ರಾಮದ ಆಶಾ ಹಾಗೂ ರಾಮದಾಸ್ ಕಾಶಿನಾಥ್ ಕಾಮತ್ ಪುತ್ರ ಗಿರೀಶ್ ಜೊತೆ ನಿಶ್ಚಯಿಸಲಾಗಿತ್ತು.
ಸ್ವಯಂವರದಲ್ಲಿ ಬಿಲ್ಲನ್ನುಎತ್ತಿದ ರಾಮನನ್ನು ಸೀತೆಮದುವೆಯಾಗುವ ರೀತಿಯ ಪರಿಕಲ್ಪನೆಯಲ್ಲಿ ತಮ್ಮ ಮಗಳ ವಿವಾಹವಾಗಬೇಕು ಎಂದುವಧುವಿನ ಕುಟುಂಬದವರು ಇಚ್ಛಿಸಿದ್ದರು.ಅದರಂತೆ ಮದುವೆ ಮಂಟಪದ ಒಳಗೆ ಧನುಸ್ಸಿನ ಮಾದರಿಯನ್ನು ಇಡಲಾಗಿತ್ತು.ಸ್ವಯಂವರದ ರೀತಿಯಲ್ಲೇ ಅವಿವಾಹಿತಯುವಕರನ್ನು ಸ್ಪರ್ಧೆಗೆ ಆಹ್ವಾನಿಸಲಾಯಿತು. ಎಲ್ಲರೂ ಸ್ಪರ್ಧೆಯಲ್ಲಿ ಸೋಲುವ ಪ್ರಸಂಗವನ್ನು ಪ್ರದರ್ಶಿಸಿದರು. ನಂತರ ವರ ಗಿರೀಶ್ ಬಿಲ್ಲನ್ನುಎತ್ತಿ ಮುರಿದರು. ಬಳಿಕ ಸ್ವಯಂ ವರದಲ್ಲಿ ವಿಜೇತರಾಗಿ ವಧು ನಿಶಾ ಅವರನ್ನು ವಿವಾಹವಾದರು.
ಇದರ ವಿಡಿಯೊತುಣುಕನ್ನು ವರ ಗಿರೀಶ್ಫೇಸ್ಬುಕ್ನ ತಮ್ಮ ಖಾತೆಗೆ ಅಪ್ಲೋಡ್ ಮಾಡಿದ್ದಾರೆ. ಅದನ್ನು ಸಾವಿರಾರು ಜನ ವೀಕ್ಷಿಸಿದ್ದು, ವಿವಾಹ ಸಂದರ್ಭದಲ್ಲಿ ಪುರಾಣ ಪ್ರಸಂಗವನ್ನು ನೆನಪಿಸಿದ್ದಕ್ಕೆಮೆಚ್ಚುಗೆ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.