ADVERTISEMENT

ಭಟ್ಕಳ: ಹಿಂಸಾತ್ಮಕವಾಗಿ ತುಂಬಲಾಗಿದ್ದ ಒಂಬತ್ತು ಜಾನುವಾರು ಜಪ್ತಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 7:16 IST
Last Updated 4 ಜುಲೈ 2021, 7:16 IST
ಲಾರಿಯಲ್ಲಿ ತುಂಬಲಾಗಿದ್ದ ಒಂಬತ್ತು ಜಾನುವಾರುಗಳು
ಲಾರಿಯಲ್ಲಿ ತುಂಬಲಾಗಿದ್ದ ಒಂಬತ್ತು ಜಾನುವಾರುಗಳು   

ಭಟ್ಕಳ: ಲಾರಿಯಲ್ಲಿ ಹಿಂಸಾತ್ಮಕವಾಗಿ ತುಂಬಲಾಗಿದ್ದ ಒಂಬತ್ತು ಜಾನುವಾರನ್ನು ಶಹರ ಠಾಣೆ ಪೊಲೀಸರು ಭಾನುವಾರ ವಶ ಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಪಟ್ಟಣದ ಮುಗ್ದುಂ ಕಾಲೊನಿಯಲ್ಲಿದ್ದ ಲಾರಿಯಲ್ಲಿ ಜಾನುವಾರನ್ನು ತುಂಬಲಾಗಿತ್ತು. ಅವುಗಳನ್ನು ವಧೆ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ.

ಖಚಿತ ಮಾಹಿತಿ ಮೇರೆಗೆ ನಡೆಸಲಾದ ಕಾರ್ಯಾಚರಣೆಯಲ್ಲಿ ಪಿ.ಎಸೈ ಹನುಮಂತಪ್ಪ ಕುಡುಗುಂಟಿ, ಗ್ರಾಮೀಣ ಠಾಣೆ ಪಿ.ಎಸೈ ಭರತ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.