ADVERTISEMENT

ಗಾಂಜಾ ವಶ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 12:23 IST
Last Updated 16 ಸೆಪ್ಟೆಂಬರ್ 2020, 12:23 IST
ದಾಂಡೇಲಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿರುವುದು
ದಾಂಡೇಲಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿರುವುದು   

ದಾಂಡೇಲಿ: ನಗರ ಸಮೀಪದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹ 38 ಸಾವಿರ ಮೌಲ್ಯದ 1.9 ಕೆ.ಜಿ ಗಾಂಜಾ, ₹ 1,500 ನಗದನ್ನು ಜಪ್ತಿ ಮಾಡಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಇಂದಿರಾನಗರದ ನಿವಾಸಿ, ಪೇಂಟರ್ ಚಾಂದಪಾಷಾ (22), ಅದೇ ತಾಲ್ಲೂಕಿನ ಬಂಗಾಲಿ ಕ್ಯಾಂಪ್‌ನ ವಿದ್ಯಾರ್ಥಿ ಪ್ರಣೀತ ಸಾಣಾ (19) ಬಂಧಿತರು. ಪೊಲೀಸರ ದಾಳಿಯ ಸಂದರ್ಭದಲ್ಲಿ ಮತ್ತಿಬ್ಬರು ಆರೋಪಿಗಳಾದ ದಾಂಡೇಲಿ ಪಟೇಲನಗರದ ಹುಸೇನಸಾಬ (24) ಹಾಗೂ ಮುಜಾಫರ್ ಖಾನ್ ತಪ್ಪಿಸಿಕೊಂಡಿದ್ದಾರೆ.

ಸರ್ಕಲ್ ಇನ್‌ಸ್ಪೆಕ್ಟರ್ ಪ್ರಭು ಗಂಗನಹಳ್ಳಿ, ಇನ್‌ಸ್ಪೆಕ್ಟರ್ ಯಲ್ಲಪ್ಪ.ಎಸ್, ಎ.ಎಸ್.ಐ.ಬಸವರಾಜ ವಕ್ಕುಂದ, ಹಿರಿಯ ಕಾನ್‌ಸ್ಟೆಬಲ್‌ಗಳಾದ ಪ್ರಶಾಂತ ಎ.ನಾಯ್ಕ, ನಿಂಗಪ್ಪ ನರೇಗಲ್, ಸಿಬ್ಬಂದಿ ಆದಪ್ಪ ವೈ ಧಾರವಾಡಕರ್, ಸಂತೋಷ ಚನ್ನಣ್ಣನವರ, ಚಿನ್ಮಯಾನಂದ ಪತ್ತಾರ, ಮಹಮ್ಮದ್ ಹನೀಫ್, ದಶರಥ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.