ಕುಮಟಾ: ಸಮುದ್ರಕ್ಕೆ ಹೋಗುವ ರಸ್ತೆ ವಿವಾದಕ್ಕೆ ಸಂಬಂಧಿಸಿದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ತಾಲ್ಲೂಕಿನ ಹೊಲನಗದ್ದೆ ಗ್ರಾಮ ಪಂಚಾಯ್ತಿ ಸದಸ್ಯ ಎಂ.ಎಂ.ಹೆಗಡೆ ಅವರಿಗೆ ಮಹಿಳೆಯೊಬ್ಬರು ಮಲ ಎರಚಿ ಹಲ್ಲೆ ನಡೆಸಿ ಅವಮಾನಿಸಿದ ಪ್ರಕರಣ ಶನಿವಾರ ನಡೆದಿದೆ.
ಹೊಲನಗದ್ದೆ ಗ್ರಾಮದ ಶೈಲಾ ಹರಿಕಂತ್ರ ಮಲ ಎರಚಿದ ಆರೋಪಿ. ಶನಿವಾರ ಬೆಳಿಗ್ಗೆ ಸದಸ್ಯರು ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ ಹೋಗುತ್ತಿರುವಾಗ ಪ್ಲಾಸ್ಟಿಕ್ ಡಬ್ಬದಲ್ಲಿ ಮಲ ಸಂಗ್ರಹಿಸಿದ್ದ ಆರೋಪಿ ಅವರ ಮೈಮೇಲೆ ಮಲ ಎರಚಿ ಬೆದರಿಕೆ ಹಾಕಿದ್ದಾರೆ.
‘ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಪತಿ ಸದಾನಂದ ಹರಿಕಂತ್ರ ಎನ್ನುವವರ ಮೇಲೂ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಇಬ್ಬರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದು ಕುಮಟಾ ಪಿ.ಎಸ್.ಐ ಮಂಜುನಾಥ ಗೌಡರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.