ADVERTISEMENT

ಹೊನ್ನಾವರ: ಯಕ್ಷಗಾನ ತಾಳಮದ್ದಳೆ ನಾಳೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2023, 14:46 IST
Last Updated 10 ಜೂನ್ 2023, 14:46 IST

ಹೊನ್ನಾವರ: ಸ್ಫೂರ್ತಿರಂಗ ಹೊನ್ನಾವರ ಹಾಗೂ ಯಕ್ಷಲೋಕ ಹಳದೀಪುರ ಇವುಗಳ ಆಶ್ರಯದಲ್ಲಿ ‘ಕರ್ಣಾವಸಾನ’ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ಪ್ರಭಾತನಗರದ ಸ್ಫೂರ್ತಿರಂಗ ಕಾರ್ಯಾಲಯದಲ್ಲಿ ಜೂನ್ 11ರಂದು ಸಂಜೆ 4 ಗಂಟೆಗೆ ನಡೆಯಲಿದೆ.

ಗೋಪಾಲಕೃಷ್ಣ ಭಾಗವತ ಕಡತೋಕ, ಗಣೇಶ ಯಾಜಿ ಮಾವಿನಕೆರೆ (ಭಾಗವತಿಕೆ), ಶ್ರೀಪಾದ ಭಟ್ಟ ಕಡತೋಕ, ಪಿ.ಕೆ. ಹೆಗಡೆ, ಮಯೂರ ಹೆಗಡೆ ಹರಿಕೇರಿ (ಮದ್ದಳೆ ಮತ್ತು ಚಂಡೆ) ಹಿಮ್ಮೇಳದ ಕಲಾವಿದರಾಗಿ ಹಾಗೂ ಗಣೇಶ ಎನ್. ಹೆಗಡೆ, ಜನಾರ್ದನ ಶೆಟ್ಟಿ ಗಾಣಗೆರೆ, ಎಂ.ಎಂ. ಹೆಗಡೆ ಹಾಗೂ ಡಾ. ಎಸ್.ಡಿ. ಹೆಗಡೆ ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಭಾಗವಹಿಸುವರು’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT