ಕೂಡ್ಲಿಗಿ: ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದ ದೈವಸ್ಥರಿಂದ ಬುಧವಾರ ಬಸವೇಶ್ವರ ದೇವಸ್ಥಾನದಲ್ಲಿ ಬಸವಣ್ಣನ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ದೇವಸ್ಥಾನದಲ್ಲಿ ಬಸವಣ್ಣನ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಎತ್ತಿನ ಗಾಡಿಯಲ್ಲಿ ಚಿತ್ರನ್ನಿಟ್ಟು 50ಕ್ಕೂ ಹೆಚ್ಚು ಜೋಡಿ ಎತ್ತುಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಹಿ.ಮ. ಚಿದಾನಂದಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ, ತುಪ್ಪಳ್ಳಿ ಮೂಗಣ್ಣ, ಸೋಗಿ ಗುರುಸಿದ್ದಪ್ಪ, ಕಾಯಿಕೆಡುವ ವಿಜಯಕುಮಾರ್, ಮಹೇಶ್, ಗುರು, ಹುಗ್ಗಿ ಬಸವರಾಜ, ವೀರಣ್ಣ, ಶಿವಲಿಂಗ, ಕೋಗಳಿ ಮಂಜುನಾಥ, ಕೊಡದೀರಪ್ಪ, ವಿಭೂತಿ ಈರಣ್ಣ, ಬಣಕಾರ ಕೊಟ್ರೇಶ್, ಬ್ಯಾಳಿ ವಿಜಯಕುಮಾರ್, ಗೌಡ್ರು ಸುನಿಲ್, ಎಂ. ಗುರುಸಿದ್ದನಗೌಡ, ಟಿ.ಜಿ. ಮಲ್ಲಿಕಾರ್ಜುನ ಗೌಡ, ಗುಳಿಗಿ ವೀರೇಂದ್ರ, ಎಚ್. ರೇವಣ್ಣ, ಗಿರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.