ADVERTISEMENT

ವಿಜಯನಗರ: ಧರ್ಮಸ್ಥಳಕ್ಕೆ ಬೈಸಿಕಲ್‌ನಲ್ಲಿ ಪ್ರವಾಸ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 7:05 IST
Last Updated 9 ಆಗಸ್ಟ್ 2021, 7:05 IST
ಹೊಸಪೇಟೆಯ ಚಿತ್ತವಾಡ್ಗಿ, ತಾಲ್ಲೂಕಿನ ಹೊಸೂರಿನ 40 ಯುವಕರು ಸೋಮವಾರ ಬೈಸಿಕಲ್‌ ಮೇಲೆ ಧರ್ಮಸ್ಥಳಕ್ಕೆ ಪಯಣ ಬೆಳೆಸಿದರು
ಹೊಸಪೇಟೆಯ ಚಿತ್ತವಾಡ್ಗಿ, ತಾಲ್ಲೂಕಿನ ಹೊಸೂರಿನ 40 ಯುವಕರು ಸೋಮವಾರ ಬೈಸಿಕಲ್‌ ಮೇಲೆ ಧರ್ಮಸ್ಥಳಕ್ಕೆ ಪಯಣ ಬೆಳೆಸಿದರು   

ಹೊಸಪೇಟೆ (ವಿಜಯನಗರ): ಇಲ್ಲಿನ ಚಿತ್ತವಾಡ್ಗಿ ಹಾಗೂ ತಾಲ್ಲೂಕಿನ ಹೊಸೂರು ಗ್ರಾಮದ 40 ಯುವಕರು ಸೋಮವಾರ ಧರ್ಮಸ್ಥಳಕ್ಕೆ ಬೈಸಿಕಲ್‌ನಲ್ಲಿ ಪಯಣ ಬೆಳೆಸಿದರು.

ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಆ. 15ರಂದು ಪುನಃ ನಗರಕ್ಕೆ ಮರಳುತ್ತಾರೆ. ಪ್ರತಿ ವರ್ಷ ಕ್ವಿಟ್‌ ಇಂಡಿಯಾ ಚಳವಳಿಯ ದಿನ ಬೈಸಿಕಲ್‌ನಲ್ಲಿ ಧರ್ಮಸ್ಥಳಕ್ಕೆ ಹೋಗುತ್ತಾರೆ. ಮಳೆ, ಬೆಳೆ, ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ.

ಚಿತ್ತವಾಡ್ಗಿಯ ಗಂಗಮ್ಮ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ವಿಶೇಷ ಪೂಜೆ ನೆರವೇರಿಸಿದ ನಂತರ ಅಲಂಕರಿಸಿದ ಬೈಸಿಕಲ್‌ಗಳನ್ನು ತುಳಿಯುತ್ತ ಧರ್ಮಸ್ಥಳದ ಕಡೆಗೆ ಮುಖ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.