ADVERTISEMENT

ಹೊಸಪೇಟೆ | ಜಾಗತಿಕ ತಾಪಮಾನ ಕಡಿತ ಯತ್ನ ಅಗತ್ಯ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 7:35 IST
Last Updated 19 ಜುಲೈ 2025, 7:35 IST
ಹೊಸಪೇಟೆಯಲ್ಲಿ ಶುಕ್ರವಾರ ಎಸ್‌ಪಿ ಎಸ್‌.ಜಾಹ್ನವಿ ಅವರು ಪರಿಸರ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು
ಹೊಸಪೇಟೆಯಲ್ಲಿ ಶುಕ್ರವಾರ ಎಸ್‌ಪಿ ಎಸ್‌.ಜಾಹ್ನವಿ ಅವರು ಪರಿಸರ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು   

ಹೊಸಪೇಟೆ (ವಿಜಯನಗರ): ಜಾಗತಿಕ ಮಟ್ಟದಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ, ಇದನ್ನು ತಗ್ಗಿಸುವ ಹೊಣೆ ಯುವಜನತೆ ಸಹಿತ ನಮ್ಮೆಲ್ಲರ ಮೇಲಿದೆ ಎಂದು ನೂತನ ಪೊಲೀಸ್ ವರಿಷ್ಠಾಧಿಕಾರಿ ಎಸ್‌.ಜಾಹ್ನವಿ ಹೇಳಿದರು.

ಅವರು ಶುಕ್ರವಾರ ಡಿಎಆರ್ ಮೈದಾನದ ಆವರಣದಲ್ಲಿ ಎಸ್‌.ಎಲ್‌.ಆರ್ ಮೆಟಾಲಿಕ್ಸ್ ಕಂಪನಿಯ ಸಿಎಸ್‌ಆರ್‌ ಯೋಜನೆಯ ಪರಿಸರ ದಿನ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.

ಕಾಡು ಬೆಳೆಸಿದಾಗ ಜಾಗತಿಕ ತಾಪಮಾನ ತಗ್ಗುತ್ತದೆ, ಹಳ್ಳಿ, ಪಟ್ಟಣಗಳಲ್ಲಿ ವಿದ್ಯಾರ್ಥಿಗಳಿಗೆ ಈ ಸಂದೇಶ ತಲುಪಬೇಕಾಗಿದೆ ಎಂದರು.

ADVERTISEMENT

ಎಸ್‌.ಎಲ್‌.ಆರ್ ಮೆಟಾಲಿಕ್ಸ್ ಕಂಪನಿಯ ಅಧಿಕಾರಿ ವೇದವ್ಯಾಸ ಮಾತನಾಡಿದರು. ಡಿವೈಎಸ್‌ಪಿಗಳಾದ ಟಿ.ಮಂಜುನಾಥ್, ಮಲ್ಲೇಶ್ ದೊಡ್ಡಮನಿ, ವೆಂಕಟಪ್ಪ ನಾಯಕ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.