ADVERTISEMENT

ಹೊಸಪೇಟೆ | ಬಾಲಕರ ಕುಟುಂಬಕ್ಕೆ ನಿಯಾಜಿ ನೆರವು

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 14:30 IST
Last Updated 23 ಜೂನ್ 2025, 14:30 IST
ಕಾರಿಗನೂರಿನಲ್ಲಿ ಸಂತ್ರಸ್ತ ಕುಟುಂಬಕ್ಕೆ ಭಾನುವಾರ ನೆರವು ನೀಡಿದ ‘ಹುಡಾ’ ಅಧ್ಯಕ್ಷ ಎಚ್‌.ಎನ್‌.ಎಫ್‌.ಮೊಹಮ್ಮದ್ ಇಮಾಮ್‌ ನಿಯಾಜಿ
ಕಾರಿಗನೂರಿನಲ್ಲಿ ಸಂತ್ರಸ್ತ ಕುಟುಂಬಕ್ಕೆ ಭಾನುವಾರ ನೆರವು ನೀಡಿದ ‘ಹುಡಾ’ ಅಧ್ಯಕ್ಷ ಎಚ್‌.ಎನ್‌.ಎಫ್‌.ಮೊಹಮ್ಮದ್ ಇಮಾಮ್‌ ನಿಯಾಜಿ   

ಹೊಸಪೇಟೆ (ವಿಜಯನಗರ): ಕಾರಿಗನೂರಿನ ಚೆಕ್‌ಡ್ಯಾಂನಲ್ಲಿ ಮುಳುಗಿ ಮೃತಪಟ್ಟ ಬಾಲಕರಾದ ಅರವಿಂದ ಮತ್ತು ಹನುಮಂತ ಅವರ ಕುಟುಂಬದವರಿಗೆ ಸಾಂತ್ವನ ಹೇಳಿರುವ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷ ಎಚ್‌.ಎನ್‌.ಎಫ್‌.ಮೊಹಮ್ಮದ್ ಇಮಾಮ್‌ ನಿಯಾಜಿ, ವೈಯಕ್ತಿಕವಾಗಿ ತಲಾ ₹25 ಸಾವಿರದ ನೆರವು ನೀಡಿದ್ದಾರೆ.

ಕುಟುಂಬವು ಕಡುಬಡತನದಲ್ಲಿ ಇರುವ ಕುರಿತು ಮಾಹಿತಿ  ತಿಳಿದ ಅವರು, ಭಾನುವಾರ ಸ್ಥಳಕ್ಕೆ ತೆರಳಿ ನೀಡಿದರು. ರಾಜ್ಯ ಸರ್ಕಾರದಿಂದ ಹೆಚ್ಚಿನ ಸಹಾಯ ಕೊಡಿಸುವ ಭರವಸೆ ನೀಡಿದರು.

ಈ ವೇಳೆ ನಗರಸಭೆ ಅಧ್ಯಕ್ಷ ಎನ್‌.ರೂಪೇಶ್ ಕುಮಾರ್, ವಾರ್ಡ್‌ ಸದಸ್ಯರಾದ ನಾಗೇಂದ್ರ, ದ್ವಾರಕೇಶ್, ಬಜಾರಪ್ಪ, ಪರಮೇಶ ಗೌಡ್ರು, ಭಾಷಾ, ಭರತ್, ಮೋಹನ್ ಸ್ವಾಮಿ, ಫಕ್ರುದ್ದೀನ್ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.