ADVERTISEMENT

ಹೂವಿನಹಡಗಲಿ | ಬಾವಿಗೆ ಬಿದ್ದು ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 10:25 IST
Last Updated 2 ಏಪ್ರಿಲ್ 2023, 10:25 IST
   

ಹೂವಿನಹಡಗಲಿ (ವಿಜಯನಗರ) : ತಾಲ್ಲೂಕಿನ ತಿಪ್ಪಾಪುರ ಗ್ರಾಮದ ಗಡಿ ದುರುಗಮ್ಮ ದೇವಸ್ಥಾನ ಹಿಂಭಾಗದ ಪಾಳು ಬಾವಿಗೆ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಜರುಗಿದೆ.

ಕೊಯಿಲಾರಗಟ್ಟಿ ಗ್ರಾಮದ ಸಿಂಗಟಾಲೂರು ವೀರೇಶ (32) ಮೃತರು. ಶನಿವಾರ ಸ್ನೇಹಿತರೊಂದಿಗೆ ಊಟಕ್ಕೆ ತೆರಳಿದ್ದ ಯುವಕ ಊಟ ಮುಗಿಸಿಕೊಂಡು ಬಾವಿ ಹತ್ತಿರದ ಹುಣಸೆ ಮರ ಏರಿದ್ದಾನೆ. ಆಕಸ್ಮಿಕವಾಗಿ ಮರದಿಂದ ಬಾವಿಗೆ ಬಿದ್ದು ಸಾವಿಗೀಡಾಗಿದ್ದಾನೆ ಎಂದು ಮೃತನ ಸಂಬಂಧಿಗಳು ನೀಡಿದ ದೂರಿನನ್ವಯ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT