ADVERTISEMENT

ರಜೆ; ಬ್ಯಾಂಕ್‌ನಲ್ಲಿ ಜನದಟ್ಟಣೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 13:09 IST
Last Updated 1 ಜೂನ್ 2021, 13:09 IST
ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತದಲ್ಲಿರುವ ಬಿಡಿಸಿಸಿ ಬ್ಯಾಂಕಿನಿಂದ ಹಣ ಬಿಡಿಸಿಕೊಳ್ಳಲು ಮಂಗಳವಾರ ಜನ ಅಂತರ ಕಾಯ್ದುಕೊಳ್ಳದೆ ಸಾಲಿನಲ್ಲಿ ನಿಂತಿದ್ದರು–ಪ್ರಜಾವಾಣಿ ಚಿತ್ರ
ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತದಲ್ಲಿರುವ ಬಿಡಿಸಿಸಿ ಬ್ಯಾಂಕಿನಿಂದ ಹಣ ಬಿಡಿಸಿಕೊಳ್ಳಲು ಮಂಗಳವಾರ ಜನ ಅಂತರ ಕಾಯ್ದುಕೊಳ್ಳದೆ ಸಾಲಿನಲ್ಲಿ ನಿಂತಿದ್ದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ(ವಿಜಯನಗರ): ಬುಧವಾರದಿಂದ (ಜೂ. 2) ಜಾರಿಗೆ ಬರುವಂತೆ ಜಿಲ್ಲೆಯಲ್ಲಿ ನಾಲ್ಕು ದಿನ ಬ್ಯಾಂಕುಗಳು ಮುಚ್ಚಿರುವುದರಿಂದ ಮಂಗಳವಾರ ನಗರದ ವಿವಿಧ ಬ್ಯಾಂಕುಗಳಲ್ಲಿ ಜನದಟ್ಟಣೆ ಕಂಡು ಬಂತು.

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಯಲು ಜಿಲ್ಲಾಡಳಿತ ಜನರ ಓಡಾಟ ನಿಯಂತ್ರಿಸಲು ಮುಂದಾಗಿದೆ. ಅದರ ಭಾಗವಾಗಿ ಎಲ್ಲ ಬ್ಯಾಂಕುಗಳನ್ನು ನಾಲ್ಕು ದಿನ ಮುಚ್ಚಲು ಸೋಮವಾರ ಆದೇಶ ಹೊರಡಿಸಿತು. ಈ ವಿಷಯ ತಿಳಿದು ಮಂಗಳವಾರ ಬೆಳಿಗ್ಗೆಯೇ ಜನ ವಿವಿಧ ಬ್ಯಾಂಕುಗಳಿಗೆ ಬಂದಿದ್ದರು.

ಬಿಸಿಲು ಏರುತ್ತಿದ್ದಂತೆ ಉದ್ದನೆಯ ಸಾಲಿನಲ್ಲಿ ಜನ ಹಣ ಬಿಡಿಸಿಕೊಳ್ಳಲು ನಿಂತಿದ್ದರು. ರಾಷ್ಟ್ರೀಕೃತ, ವಾಣಿಜ್ಯ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಎದುರು ಗ್ರಾಹಕರ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂತರ ಕಾಯ್ದುಕೊಳ್ಳದೆ ಜನ ನಿಂತಿರುವುದು ಕಂಡು ಬಂತು. ಎಟಿಎಂಗಳಿಂದ ಎಂದಿನಂತೆ ಜನ ಹಣ ಬಿಡಿಸಿಕೊಳ್ಳಬಹುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.